ಯುವಘಟಕಗಳ ಪ್ರತಿಭಟನೆ
Team Udayavani, Oct 9, 2018, 7:00 AM IST
ಹೊಸದಿಲ್ಲಿ: ನಿರುದ್ಯೋಗ, ಹಣದುಬ್ಬರ, ತೈಲ ಬೆಲೆ ಏರಿಕೆ ಮತ್ತಿತರ ಪ್ರಮುಖ ವಿಚಾರಗಳ ಬಗ್ಗೆ ಎನ್ಡಿಎ ಸರಕಾರ ವಹಿಸಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಸೋಮವಾರ 14 ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಯೂತ್ ಫ್ರಂಟ್ ಹೊಸದಿಲ್ಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿತು. ‘ದೇಶ್ ಬಚಾವೋ, ಯುವ ಬಚಾವೋ’ ಎಂಬ ಬ್ಯಾನರ್ನಡಿ ಸಂಸತ್ ಭವನ ಚಲೋ ನಡೆಸಿದ ಈ ಒಕ್ಕೂಟದ ಸದಸ್ಯರು, ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದರು.