ಪೂಜಾ ಪೆಂಡಾಲಲ್ಲಿ ತೇಜಸ್ವಿ ರಾಜ್ಯಾಭೀಷೇಕ ನಡೆಸಿದ ಶತ್ರುಘ್ನ ಸಿನ್ಹಾ
Team Udayavani, Oct 17, 2018, 3:44 PM IST
ಪಟ್ನಾ : ಅತೃಪ್ತ ಬಿಜೆಪಿ ನಾಯಕ, ಮಾಜಿ ಬಾಲಿವುಡ್ ನಟ, ಸಂಸದ ಶತ್ರುಘ್ನ ಸಿನ್ಹಾ ಅವರಿಂದು ಪಟ್ನಾದಲ್ಲಿನ ದುರ್ಗಾ ಪೂಜಾ ಪೆಂಡಾಲಿಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜತೆಗೂಡಿ ಭೇಟಿ ನೀಡಿ ತೇಜಸ್ವಿಯ ಹಣೆಯಲ್ಲಿ ತಿಲಕ ಇಡುವ ಮೂಲಕ ಆತನ ‘ರಾಜ್ಯಾಭಿಷೇಕ’ ವನ್ನು ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಸದಾ ಟೀಕಾ ಪ್ರಹಾರ ನಡೆಸುತ್ತಿರುವ ಶತ್ರುಘ್ನ ಸಿನ್ಹಾ ಅವರು ಆರ್ಜೆಡಿ ಉತ್ತರಾಧಿಕಾರಿ ತೇಜಸ್ವಿ ಜತೆಗೆ ಡಾಕ್ ಬಂಗ್ಲೆ ರಸ್ತೆಯಲ್ಲಿನ ಪೂಜಾ ಪೆಂಡಾಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.
ಪೆಂಡಾಲ್ನಿಂದ ಮರಳುವಾಗ ಶತ್ರುಘ್ನ ಸಿನ್ಹಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ತೇಜಸ್ವಿ ಸಣ್ಣ ಪ್ರಾಯದವನಿದ್ದು ಆತನಲ್ಲಿ ನಾಯಕತ್ವ ಗುಣಗಳಿವೆ. ಆತನಿಗೆ ನನ್ನ ಶುಭ ಹಾರೈಕೆಗಳು. ಇವತ್ತು ಆತನ ರಾಜ್ಯಾಭಿಷೇಕವನ್ನು ನಾನು ನಡೆಸಿದ್ದೇನೆ; ಬಿಹಾರವನ್ನು ಆತ ಸಮರ್ಥವಾಗಿ ಮುನ್ನಡೆಸುವನೆಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶತ್ರುಘ್ನ ಸಿನ್ಹಾ ಅವರು ಹಳೇ ಹಿಂದಿ ಸಿನೆಮಾದ “ಅಬ್ ತುಮ್ಹಾರೆ ಹವಾಲೆ ಎ ವತನ್ ಸಾಥಿಯೋಂ’ ಎಂಬ ಹಾಡನ್ನು ಗುನುಗಿದರು.
29ರ ಹರೆಯದ ತೇಜಸ್ವಿ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರನಾಗಿದ್ದು ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ