ಕವಿತಾ,ರೆಹಾನಾಗೆ ಸಿಗಲಿಲ್ಲ ಶಬರಿ ಮಲೆ ಪ್ರವೇಶ; ಭಾರೀ ಆಕ್ರೋಶ
Team Udayavani, Oct 19, 2018, 10:47 AM IST
ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಷಯ ಕೇರಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಶುಕ್ರವಾರ ದೇವಾಲಯದ ಒಳಗೆ ಪ್ರವೇಶಿಸಲು ಭಾರೀ ಪೊಲೀಸ್ ಪಡೆಗಳ ಕೋಟೆಯ ನಡುವೆ ಮುಂದಾದ ಇಬ್ಬರು ಮಹಿಳೆಯರಿಗೆ ಅವಾಕಶವನ್ನು ನೀಡಲಾಗಿಲ್ಲ.
ಹೈದಾರಾಬಾದ್ನ ಮೋಜೋ ಟಿವಿಯ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ರೆಹನಾ ಫಾತಿಮಾ ಮುಸ್ಲಿಂ ಮಹಿಳೆಯಾಗಿಯೂ ಪೊಲೀಸ್ ಕೋಟೆಯ ಬೆಂಬಲದೊಂದಿಗೆ ಶಬರಿ ಮಲೆ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಶುಕ್ರವಾರ ದೇವಾಲಯದ ಮುಂಭಾಗ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರನ್ನೂ ಹಿಂದಕ್ಕೆ ಕಳುಹಿಸಲಾಗಿದೆ.
ದೇವಾಲಯದ ಸುತ್ತ ಸಾವಿರಾರು ಭಕ್ತರು ಕೋಟೆ ನಿರ್ಮಿಸಿದ ಹಿನ್ನಲೆಯಲ್ಲಿ ಮಹಿಳೆಯರಿಬ್ಬರಿಗೆ ಕಮಾಂಡೋ ಮಾದರಿಯಲ್ಲಿ 200 ಕ್ಕೂ ಹೆಚ್ಚು ಪೊಲೀಸರ ಭದ್ರತೆ ನಿಯೋಜಿಸಲಾಗಿತ್ತು.
ದೇವಾಲಯದ 4 ಕಿ.ಮೀ ದೂರದಿಂದ ಇಬ್ಬರು ಪಾದಾಯಾತ್ರೆಯಲ್ಲಿ ದೇವಾಲಯಕ್ಕೆ ತೆರಳಿದ್ದರು.
ಕಲ್ಲು ತೂರಾಟ ನಡೆಯುವ ಸಾಧ್ಯತೆಗಳಿದ್ದ ಹಿನ್ನಲೆಯಲ್ಲಿ ಪೊಲೀಸರೊಂದಿಗೆ ಮಹಿಳೆಯರಿಬ್ಬರು ಹೆಲ್ಮೆಟ್ ಗಳನ್ನು ಧರಿಸಿದ್ದರು.
ಮಹಿಳೆಯರಿಗೆ ದೇವಾಲಯ ಪ್ರವೇಶಿಸುವ ಹಕ್ಕು ಇದೆ ಹಾಗಾಗಿ ನಾವು ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರದಿಂದ ಇಲ್ಲಿಯವರೆಗೆ 50 ವರ್ಷದ ಒಳಗಿನ ಯಾವುದೇ ಮಹಿಳೆಗೆ ದೇವಾಲಯ ಪ್ರವೇಶಿಸಲು ಸಾಧ್ಯವಾಗಿಲ್ಲ. ಗುರುವಾರ ನ್ಯೂಯಾರ್ಕ್ ಟೈಮ್ಸ್ ನ ಪತ್ರಕರ್ತೆಗೆ ಭಾರೀ ವಿರೋಧ ತೋರಿ ಹಿಂದಕ್ಕೆ ಕಳುಹಿಸಲಾಗಿತ್ತು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ಯಾರೂ ತಡೆಯಬಾರದು.ಯಾರಿಗೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ
ರೆಹನಾ ವಿರುದ್ಧ ಅಯ್ಯಪ್ಪ ಭಕ್ತರು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕವಿತಾ ಕಾರ್ಯ ನಿರ್ವಹಿಸುವ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಮೋಜೋ ಟಿವಿ ಕಚೇರಿಯ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ ಟಿವಿ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ