ಕರ್ನಾಟಕದ 11 ಉಗ್ರರ ಪತ್ತೆಗೆ ನೆರವು ಕೊಡಿ
Team Udayavani, Oct 22, 2018, 3:06 PM IST
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ದಳವು (ಎನ್ಐಎ) 258 ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಸೇರಿದಂತೆ ಹಲವರನ್ನು ಹೆಸರಿಸಿದೆ. ಅಷ್ಟೇ ಅಲ್ಲ, ಕರ್ನಾಟಕದ 11 ಉಗ್ರರ ಹೆಸರೂ ಇದೆ. ವಿವಿಧ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿಸಿ ಕೊಂಡ ವಿವರಗಳು ಹಾಗೂ ಫೋಟೋಗಳನ್ನು ಎನ್ಐಎ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಇವ ರನ್ನು ಪತ್ತೆ ಮಾಡಲು ನೆರವಾಗಿ ಎಂದು ಸಾರ್ವಜನಿಕರನ್ನು ಕೇಳಿಕೊಂಡಿದೆ. ಇವರ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್ಐಎ ಭರವಸೆ ನೀಡಿದೆ. 011-24368800 ಗೆ ಕರೆ ಮಾಡಬಹುದಾಗಿದೆ ಅಥವಾ ಇಮೇಲ್ ಕಳುಹಿಸಬಹುದಾಗಿದೆ.
ಒಟ್ಟು 258 ಉಗ್ರರ ಪೈಕಿ 15 ಮಹಿಳೆಯರಿದ್ದಾರೆ. ಈ ಪೈಕಿ ಬಹುತೇಕ ಉಗ್ರರ ವಿರುದ್ಧ ಇಂಟರ್ಪೋಲ್ ನೋಟಿಸ್ ಹೊರಡಿಸಲಾಗಿದೆ. ಬಹುತೇಕರು ಉಗ್ರರಾಗಿದ್ದು, ನಕ್ಸಲರೂ ಈ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಈ ಪೈಕಿ 57 ಉಗ್ರರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ಈಗಾಗಲೇ ಘೋಷಿಸಲಾಗಿದೆ. ಈ ಪೈಕಿ ನಕ್ಸಲ್ ಲೀಡರ್ ಮುಪ್ಪಳ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ ತಲೆಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪಾಕಿಸ್ಥಾನದ 15 ಉಗ್ರರೂ ಈ ಪಟ್ಟಿಯಲ್ಲಿದ್ದಾರೆ. ಈ ಹಿಂದೆ 2011ರಲ್ಲಿ 50 ಅಪರಾಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
ಕರ್ನಾಟಕದ ಉಗ್ರರು
ಮಹಮ್ಮದ್ ಇಕ್ಬಾಲ್ / ಇಕ್ಬಾಲ್ ಭಟ್ಕಳ್ – ಭಟ್ಕಳ
ರಿಯಾಜ್ ಭಟ್ಕಳ್ – ಭಟ್ಕಳ
ಮಹಮ್ಮದ್ ಅನ್ವರ್ ಹುಸೇನ್ / ಅನ್ವರ್ ನೂರ್ ಹುಸೇನ್ – ಭಟ್ಕಳ್
ಮೊಹಮದ್ ಸಲೀಮ್ ಇಶಾಖೀ – ಭಟ್ಕಳ
ಮೊಹಮ್ಮದ್ ಶಹೀದ್ ಫೈಸಲ್ – ಬೆಂಗಳೂರು
ಉಸ್ಮಾನೆ ಘನಿ ಖಾನ್ – ಧಾರವಾಡ
ಮೊಯಿದೀನ್ ಉಮ್ಮರ್ ಬ್ಯಾರಿ – ಉಡುಪಿ
ಘೌಸ್ ಭಾಯ್ – ಬೆಂಗಳೂರು, ಆರ್ಟಿ ನಗರ
ಶಫಿ ಅರ್ಮರ್ – ಭಟ್ಕಳ
ಮೊಹಮ್ಮದ್ ಹುಸೇನ್
ಫರ್ಹಾನ್ – ಭಟ್ಕಳ
ಜಯಪ್ರಕಾಶ್ – ಕರ್ನಾಟಕ – 2009ರ ಗೋವಾ ಬಾಂಬ್ ದಾಳಿ
ಕಾಸರಗೋಡು ಹಾಗೂ ಕಣ್ಣೂರು
ಅಬ್ದುಲ್ಲಾ ಹಾಜಿ – ಕಾಸರಗೋಡು
ಕುತಿರಮ್ಮಾಲ್ ಮೊಹಮ್ಮದ್ ಸಜಿದ್ – ಕಾಸರಗೋಡು
ಕಲ್ಲುಕೆಟ್ಟಿಯ ಪುರಾಯಿಲ್ ಇಜಾಸ್ – ಕಾಸರಗೋಡು
ತೆಕ್ಕೆ ಕೊಲೆತ್ ಮುರ್ಶಿದ್ ಮೊಹಮ್ಮದ್ – ಕಾಸರಗೋಡು
ರಫೀಲಾ – ಕಾಸರಗೋಡು
ಅಜ್ಮಲಾ – ಕಾಸರಗೋಡು
ಎಂ.ಟಿ.ಪಿ ಫಿರೋಸ್ ಖಾನ್ – ಕಣ್ಣೂರು
ಅಬ್ದುಲ್ ರಶೀದ್ ಅಬ್ದುಲ್ಲಾ – ಕಣ್ಣೂರು
ಕುರಿಯಾ ಶಮಿÕಯಾ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಯಿಲ್ ಅಶ್ಫಾಕ್ ಮಜೀದ್ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಾಯಿಲ್ ಶಿಹಾಸ್ – ಕಣ್ಣೂರು
ನಡುವಿಲ್ಲೆ ಪುರಾಯಿಲ್ ಮುಹಮ್ಮದ್ ಮರ್ವಾನ್ ಬೆಕರ್ ಇಸ್ಮಾಯಿಲ್ – ಕಣ್ಣೂರು
ಮಯಿಲ್ ವಲಪ್ಪಿಲ್ ಮುಹಮ್ಮದ್ ಮಂಜಾದ್ – ಕಣ್ಣೂರು
ಪಿ.ಪಿ.ಯೂಸುಫ್ – ಕಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ