ಅಸ್ಸಾಂ: ಶಾಲೆಯಲ್ಲಿ ದನದ ಮಾಂಸ ಬೇಯಿಸಿದ ಆರೋಪ: ಶಿಕ್ಷಕ ಅರೆಸ್ಟ್
Team Udayavani, Oct 24, 2018, 5:26 PM IST
ಗುವಾಹಟಿ : ಶಾಲೆಯ ಅಡುಗೆ ಕೋಣೆಯಲ್ಲಿ ದನದ ಮಾಂಸ ಬೇಯಿಸಿದರೆಂಬ ಆರೋಪದ ಮೇಲೆ ಅಸ್ಸಾಂ ಮೂಲದ ಶಾಲಾ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದರಾಂಗ್ ಜಿಲ್ಲೆಯ ದಳಗಾಂವ್ ಪಟ್ಟಣದಲ್ಲಿನ ದಾಖೀನ್ ದೂಲಿಪಾರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಸೀರುದ್ದೀನ್ ಅಹ್ಮದ್ ಬಂಧಿತ ಶಿಕ್ಷಕ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಇವರು ದನದ ಮಾಂಸ ಬೇಯಿಸಿದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ.
ಕೆಲವು ಆರೋಪಿಸಿರುವ ಶಿಕ್ಷಕ ಅಹ್ಮದ್ ಅವರು ಕೆಲವು ಮಕ್ಕಳಿಗೆ ದನದ ಮಾಂಸದಡುಗೆಯನ್ನು ಬಡಿಸಿದ್ದಾರೆ. ಆದರೆ ಶಾಲಾಧಿಕಾರಿಗಳು ಈ ವಿಷಯವನ್ನು ಇನ್ನಷ್ಟೇ ದೃಢೀಕರಿಸಬೇಕಿದೆ.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಣಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮಾಲಕ ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಉತ್ತೇಜಿಸಲು ಶಿಕ್ಷಕ ಅಹ್ಮದ್ ಯತ್ನಿಸಿರುವುದಾಗಿ ಎಫ್ಐಆರ್ನಲ್ಲಿ ದೂರಲಾಗಿದೆ.
ದೇಶದ ಕೆಲವು ಭಾಗಗಳಲ್ಲಿ ಗೋಮಾಂಸ ನಿಷೇಧವಿದ್ದು ಈ ಬಗ್ಗೆ ಭಾರೀ ಹುಯಿಲೆಬ್ಬಿಸಲಾಗಿದೆ. ಇದನ್ನು ಉಲ್ಲೇಖೀಸಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಈ ವರ್ಷದ ಆದಿಯಲ್ಲಿ, “ದನದ ಮಾಂಸವನ್ನು ಯಾರೂ ತಿನ್ನಬಹುದು; ಆದರೆ ಅದರ ಸಂಭ್ರಮಾಚರಣೆಯ ಅಗತ್ಯ ಇಲ್ಲ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ