27 ಆಪ್ ಶಾಸಕರ ಅನರ್ಹತೆ ಅರ್ಜಿ: ರಾಷ್ಟ್ರಪತಿಯಿಂದ ವಜಾ
Team Udayavani, Oct 25, 2018, 4:14 PM IST
ಹೊಸದಿಲ್ಲಿ : ನಗರದಲ್ಲಿನ ವಿವಿಧ ಆಸ್ಪತ್ರೆಗಳ ರೋಗಿ ಕಲ್ಯಾಣ ಸಮಿತಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕಾರಣಕ್ಕೆ ಲಾಭದಾಯಕ ಹುದ್ದೆ ಹೊಂದಿರುವರು ಎನ್ನಲಾಗಿರುವ ದಿಲ್ಲಿಯ 27 ಆಳುವ ಆಮ್ ಆದ್ಮಿ ಸರಕಾರದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರುವ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಜಾ ಮಾಡಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಚುನಾವಣಾ ಆಯೋಗವು ನೀಡಿದ್ದ ಪರಿಣತ ಅಭಿಪ್ರಾಯವನ್ನು ಆಧರಿಸಿ ರಾಷ್ಟ್ರಪತಿಗಳು ಶಾಸಕರ ಅನರ್ಹತೆ ಕೋರಿದ ಅರ್ಜಿಯನ್ನು ವಜಾ ಗೊಳಿಸಿದರು ಎಂದು ಹಿರಿಯ ಚುನಾವಣಾಧಿಕಾರಿಯೋರ್ವರು ಇಂದು ಗುರುವಾರ ತಿಳಿಸಿದರು.
ಶಾಸಕರ ಅನರ್ಹತೆಗೆ ಯಾವುದೇ ಕಾನೂನು ಸಮ್ಮತ ನೆಲೆಗಟ್ಟು ಇರುವುದನ್ನು ಚುನಾವಣಾ ಆಯೋಗ ಕಾಣಲಿಲ್ಲ ಎಂದು ಅಧಿಕಾರಿ ಹೇಳಿದರು.