ಆರ್ಬಿಐ, ಸಿಬಿಐ ಒಗ್ಗೂಡಿಸಿ ಏಕತೆಯ ಬಗ್ಗೆ ಮಾತನಾಡಿ: ಮೋದಿಗೆ ವಘೇಲಾ
Team Udayavani, Oct 30, 2018, 10:45 AM IST
ಗಾಂಧಿನಗರ : “ಎಲ್ಲಕ್ಕಿಂತ ಮೊದಲು ನೀವು (ಪ್ರಧಾನಿ ನರೇಂದ್ರ ಮೋದಿ) ಆರ್ಬಿಐ ಮತ್ತು ಸಿಬಿಐ ಅನ್ನು ಒಗ್ಗೂಡಿಸಿ; ಅನಂತರವೇ ಏಕತೆಯ ಬಗ್ಗೆ ಮಾತನಾಡಿ’ ಎಂದು ಗುಜರಾತಿನ ಹಿರಿಯ ರಾಜಕಾರಣಿ ಶಂಕರ್ಸಿಂಗ್ ವಘೇಲಾ ಲೇವಡಿ ಮಾಡಿದ್ದಾರೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ “ಏಕತೆಯ ಪ್ರತಿಮೆ’ ಯೋಜನೆಯನ್ನು ಟೀಕಿಸಿ ಮಾತನಾಡಿದ ವಘೇಲಾ, ‘ಪ್ರಧಾನಿ ಮೋದಿ ಅವರ ಏಕತಾ ಪ್ರತಿಮೆಯ ಮಹತ್ವಾಕಾಂಕ್ಷಿ ಯೋಜನೆಯು ಬಿಜೆಪಿ ಸರಕಾರದ ಕೇವಲ ಒಂದು ಮಾರ್ಕೆಟಿಂಗ್ ಗಿಮಿಕ್ ಆಗಿದೆ’ ಎಂದು ಟೀಕಿಸಿದರು.
”ಏಕತಾ ಪ್ರತಿಮೆಯನ್ನು ಅನಾವರಣಗೊಳಿಸುವ ಮುನ್ನ ನೀವು ಸಿಬಿಐ ಮತ್ತು ಆರ್ಬಿಐ ನಡುವೆ ಏಕತೆಯನ್ನು, ಹೊಂದಾಣಿಕೆಯನ್ನು ಸಾಧಿಸಿ” ಎಂದು ಪ್ರಧಾನಿ ಮೋದಿ ಗೆ ಹೇಳಿದರು.
”ಭಾರತೀಯ ರೂಪಾಯಿಯ ಪತನವನ್ನು ತಡೆಯುವುದಕ್ಕಾಗಿ, ಇಂಧನ ಬೆಲೆಯನ್ನು ಇಳಿಸುವುದಕ್ಕಾಗಿ ನೀವು ಮೊದಲು ಆರ್ಬಿಐ, ಸಿಬಿಐ ಅನ್ನು ಒಗ್ಗೂಡಿಸಿ; ಅನಂತರವೇ ಏಕತೆಯ ಮಾತನ್ನಾಡಿ” ಎಂದು ವಘೇಲಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ