ಪ್ರಧಾನಿ ಮೋದಿ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಣೆ
Team Udayavani, Nov 7, 2018, 11:49 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿನ ಭಾರತ-ಚೀನ ಗಡಿಯಲ್ಲಿ, 11,000 ಅಡಿ ಎತ್ತರದಲ್ಲಿ, ನೀಲಾಂಗ್ ಕಣಿವೆಯಲ್ಲಿರುವ ಹರ್ಷಿಲ್ ಸಮೀಪದ ಪ್ರದೇಶದಲ್ಲಿ ಭಾರತೀಯ ಜವಾನರೊಂದಿಗೆ 2018ರ ದೀಪಾವಳಿಯನ್ನು ಇಂದು ಬುಧವಾರ ಬೆಳಗ್ಗೆ ಆಚರಿಸಿದರು.
ಅನಂತರ ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿನ ಶಿವ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ್ದರು.
ಕೊರೆಯುವ ಚಳಿಯಲ್ಲಿ ದೇಶದ ರಕ್ಷಣೆಯ ಕರ್ತವ್ಯವದಲ್ಲಿ ನಿರತರಾಗಿರುವ ಭಾರತೀಯ ಜವಾನರ ದೃಢ ಸಂಕಲ್ಪ, ಕರ್ತವ್ಯ ಪರತೆಯನ್ನು ಪ್ರಧಾನಿ ಮೋದಿ ಬಹುವಾಗಿ ಕೊಂಡಾಡಿ ಅವರೊಂದಿಗೆ ದೀಪಾವಳಿಯನ್ನು ಆಚರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.
ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಚುನಾಯಿತರಾದ 2014ರಿಂದಲೂ ವರ್ಷಂಪ್ರತಿ ಗಡಿಯಲ್ಲಿ ಕರ್ತವ್ಯ ನಿರತ ಸೈನಿಕರೊಂದಿಗೆ ಸೇರಿಕೊಂಡು ದೀಪಾವಳಿ ಆಚರಿಸುವ ಕ್ರಮವನ್ನು ಇಟ್ಟುಕೊಂಡಿದ್ದಾರೆ. 2014ರಲ್ಲಿ ಮೋದಿ ಅವರು ಸಿಯಾಚಿನ್ ನಲ್ಲಿನ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.
ಪ್ರಧಾನಿ ಮೋದಿ, ಭಾರತೀಯ ಸೈನಿಕರು, ದೀಪಾವಳಿ ಆಚರಣೆ,
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿನ ಭಾರತ-ಚೀನ ಗಡಿಯಲ್ಲಿ, 11,000 ಅಡಿ ಎತ್ತರದಲ್ಲಿ, ನೀಲಾಂಗ್ ಕಣಿವೆಯಲ್ಲಿರುವ ಹರ್ಷಿಲ್ ಸಮೀಪದ ಪ್ರದೇಶದಲ್ಲಿ ಭಾರತೀಯ ಜವಾನರೊಂದಿಗೆ 2018ರ ದೀಪಾವಳಿಯನ್ನು ಇಂದು ಬುಧವಾರ ಬೆಳಗ್ಗೆ ಆಚರಿಸಿದರು.
ಅನಂತರ ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿನ ಶಿವ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ್ದರು.
ಕೊರೆಯುವ ಚಳಿಯಲ್ಲಿ ದೇಶದ ರಕ್ಷಣೆಯ ಕರ್ತವ್ಯವದಲ್ಲಿ ನಿರತರಾಗಿರುವ ಭಾರತೀಯ ಜವಾನರ ದೃಢ ಸಂಕಲ್ಪ, ಕರ್ತವ್ಯ ಪರತೆಯನ್ನು ಪ್ರಧಾನಿ ಮೋದಿ ಬಹುವಾಗಿ ಕೊಂಡಾಡಿ ಅವರೊಂದಿಗೆ ದೀಪಾವಳಿಯನ್ನು ಆಚರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.
ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಚುನಾಯಿತರಾದ 2014ರಿಂದಲೂ ವರ್ಷಂಪ್ರತಿ ಗಡಿಯಲ್ಲಿ ಕರ್ತವ್ಯ ನಿರತ ಸೈನಿಕರೊಂದಿಗೆ ಸೇರಿಕೊಂಡು ದೀಪಾವಳಿ ಆಚರಿಸುವ ಕ್ರಮವನ್ನು ಇಟ್ಟುಕೊಂಡಿದ್ದಾರೆ. 2014ರಲ್ಲಿ ಮೋದಿ ಅವರು ಸಿಯಾಚಿನ್ ನಲ್ಲಿನ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ