ಭಾರತೀಯ ಸೇನೆಗಿಂದು ಕೆ9 ವಜ್ರ, ಹೊವಿಟ್ಜರ್ ತೋಪು ಸೇರ್ಪಡೆ
Team Udayavani, Nov 9, 2018, 11:57 AM IST
ಹೊಸದಿಲ್ಲಿ : ಭಾರತೀಯ ಸೇನೆ ಇಂದು ಶುಕ್ರವಾರ ಎರಡು ಅತ್ಯಾಧುನಿಕ ಗನ್ ಸಿಸ್ಟಮ್ ಗಳನ್ನು ತನ್ನ ಶಸ್ತ್ರಾಗಾರಕ್ಕೆ ಸೇರಿಸಿಕೊಳ್ಳಲಿದೆ. ಅವೆಂದರೆ ಕೆ9 ವಜ್ರ ಮತ್ತು ಎಂ 777 ಹೊವಿಟ್ಜರ್ ತೋಪು.
ಈ ಎರಡು ಅತ್ಯಾಧುನಿಕ ತೋಪುಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುವ ಸಲುವಾಗಿ ಮಹಾರಾಷ್ಟ್ರದ ದೇವಲಾಲಿಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಕೇಂದ್ರ ಸಹಾಯಕ ಸಚಿವ ಸುಭಾಷ್ ಭಾಮರೆ ಮೊದಲಾದವರು ಭಾಗವಹಿಸಲಿದ್ದಾರೆ.
ಈ ವಿಷಯವನ್ನು ತಿಳಿಸಿರುವ ರಕ್ಷಣಾ ಸಚಿವಾಲಯ, ಈ ಅತ್ಯಾಧುನಿಕ ಲಘು ತೋಪುಗಳನ್ನು ಹೆಲಿಕಾಪ್ಟರ್ ಮೂಲಕ ಪರ್ವತ ಪ್ರದೇಶಗಳಲ್ಲೂ ಎತ್ತೂಯ್ಯಬಹುದಾಗಿದೆ ಎಂದು ತಿಳಿಸಿದೆ. ಪರ್ವತ ಪ್ರದೇಶಗಳಲ್ಲಿ ಶತ್ರು ಸೇನೆಯನ್ನು ಎದುರಿಸುವುದಕ್ಕೆ ಈ ತೋಪುಗಳು ತುಂಬ ಪರಿಣಾಮಕಾರಿಯೂ ಸಹಕಾರಿಯೂ ಆಗಲಿವೆ.
ಲಘು ಭಾರದ 145 ಹೊವಿಟ್ಜರ್ ಎಂ-777 ತೋಪುಗಳನ್ನು ಪೂರೈಸುವ ಸಂಬಂಧ ಅಮೆರಕದ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ 25 ತೋಪುಗಳನ್ನು ಸಮರ ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ತರಲಾಗುವುದು.
ಉಳಿದ 125 ತೋಪುಗಳನ್ನು ಮಹಿಂದ್ರಾ ಡಿಫೆನ್ಸ್ ನೆರವಿನಲ್ಲಿ ಭಾರತದಲ್ಲೇ ನಿರ್ಮಿಸಲಾಗುವುದು. 2019ರ ಮಾರ್ಚ್ ವೇಳೆಗೆ ತೋಪುಗಳ ಪೂರೈಕೆ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ