ಬೈಕಿನ ಮೇಲೆ ಉರುಳಿ ಬಿದ್ದ ಟ್ರಕ್: ದಂಪತಿ,ಇಬ್ಬರು ಮಕ್ಕಳ ದಾರುಣ ಸಾವು
Team Udayavani, Nov 9, 2018, 4:08 PM IST
ಮುಂಬಯಿ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಸಕ್ಕರೆ ಗೋಣಿ ಸಾಗಿಸುತ್ತಿದ್ದ ಟ್ರಕ್ ಒಂದು ಮೋಟಾರ್ ಸೈಕಲ್ ಮೇಲೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಮಜಲಗಾಂವ್ – ಪರ್ಭಾನಿ ಹೈವೇಯಲ್ಲಿ ಈ ದುರಂತ ಸಂಭವಿಸಿದೆ. ಟ್ರಕ್ಕು ಮೋಟಾರ್ ಬೈಕನ್ನು ಹಿಂದಿಕ್ಕಲು ಯತ್ನಿಸುವ ಭರದಲ್ಲಿ ಆಯ ತಪ್ಪಿ ಬೈಕಿನ ಮೇಲೆಯೇ ಉರುಳಿ ಬಿತ್ತು. ಪರಿಣಾಮವಾಗಿ ಬೈಕಿನಲ್ಲಿದ್ದ ಗಂಡ, ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳು ಟ್ರಕ್ಕಿನಡಿ ಅಪ್ಪಚ್ಚಿಯಾಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.
ಮೃತರನ್ನು ದಯಾನಂದ ಸೋಲ್ನಖೆ (42), ಆತನ ಪತ್ನಿ ಸಂಗೀತಾ (35) ಮತ್ತು ಅವರ ಮಕ್ಕಳಾದ ಪೃಥ್ವಿರಾಜ್ (12) ಹಾಗೂ ರಾಜನಂದಿನಿ (10) ಎಂದು ಗುರುತಿಸಲಾಗಿದೆ.
ಇದೇ ಅವಘಡಕ್ಕೆ ಸಿಲುಕಿದ ಮತ್ತೂಂದು ಬೈಕಿನಲ್ಲಿದ್ದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದರು. ಟ್ರಕ್ ಚಾಲಕ ರೂಪೇಶ್ ಯಾದವ್ (30) ಎಂಬಾತನನ್ನು ಪೊಲೀಸರು ಬಂಧಿಸಿ, ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA