ಗುರುವಾರ ರಾತ್ರಿ ತ.ನಾ. ಕರಾವಳಿಗೆ ಅಪ್ಪಳಿಸುವ ಪ್ರಬಲ ಗಜ ಚಂಡಮಾರುತ
Team Udayavani, Nov 15, 2018, 3:59 PM IST
ಚೆನ್ನೈ : ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಗಜ ಚಂಡಮಾರುತ ಇಂದು ಗುರುವಾರ ರಾತ್ರಿ ದಕ್ಷಿಣ ತಮಿಳು ನಾಡು ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ.
ಅಂತೆಯೇ ಈ ಚಂಡಮಾರುತದ ದಾಳಿಗೆ ಗುರಿಯಾಗುವ ಜಿಲ್ಲೆಗಳಲ್ಲಿ ಸರಕಾರಿ ಆಡಳಿತೆಯು ಕಟ್ಟೆಚ್ಚರ ಘೋಷಿಸಿದ್ದು ರಕ್ಷಣೆ ಮತ್ತು ಪರಿಹಾರ ವ್ಯವಸ್ಥೆಯನ್ನ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಪ್ರಕೃತ ಚಂಡಮಾರುತವು ಇಲ್ಲಿಂದ 258 ಕಿ.ಮೀ. ದೂರದ ನೈಋತ್ಯ ಕೊಲ್ಲಿಯಲ್ಲಿ ಇದೆ ಮತ್ತು ನೆರೆಯ ಪುದುಚೇರಿಯಿಂದ 225 ಕಿ.ಮೀ. ದೂರದ ಕಾರೈಕಲ್ನಲ್ಲಿ ಕ್ರಿಯಾಶೀಲವಾಗಿದೆ.
ಇದು ಕಡಲೂರು ಮತ್ತು ಪಾಂಬನ್ ನಡುವೆ, ನಾಗಪಟ್ಟಿಣಂ ಆಸುಪಾಸಿನಲ್ಲಿ ಗುರುವಾರ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಅದಾದ ಬಳಿಕ ಅದು ದುರ್ಬಲಗೊಳ್ಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಜ ಚಂಡಮಾರುತದ ತೀವ್ರತೆಯಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಕರಾವಳಿಗೆ ಅಪ್ಪಳಿಸುವ ವೇಳೆ ಚಂಡಮಾರುತವು ಗಂಟೆಗೆ 80ರಿಂದ 90 ಕಿ.ಮೀ. ವೇಗವನ್ನು ಹೊಂದಿರುತ್ತದೆ; ಇದು 100 ಕಿ.ಮೀ. ಕೂಡ ದಾಟಬಹುದಾಗಿದೆ. ಇದರೊಂದಿಗೆ ಈ ಪ್ರಾಂತ್ಯದ ಉದ್ದಗಲದಲ್ಲಿ ಜಡಿ ಮಳೆ ಕೂಡ ಆಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ