ಪಾಲ್ಘರ್ : ನಿವೃತ್ತ ತಹಶೀಲ್ದಾರ್ಗೆ ಗುಂಡೇಟು; ಶಂಕಾಸ್ಪದ ಸಾವು
Team Udayavani, Nov 16, 2018, 11:59 AM IST
ಥಾಣೆ : ವಸಾಯಿ ಯ 72ರ ಹರೆಯದ ನಿವೃತ್ತ ತಹಶೀಲ್ದಾರ ಪಂಡರೀನಾಥ ಸಾಂಖೆ ಅವರ, ಗುಂಡೇಟಿಗೆ ಗುರಿಯಾದ ಮೃತ ದೇಹ ನೆರೆಯ ಪಾಲ್ಘರ್ ನ ಮಾಸ್ವಾನ್ ಪ್ರದೇಶದಲ್ಲಿರುವ ಅವರ ಬಂಗ್ಲೆಯಲ್ಲಿ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾಂಖೆ ಅವರು ಬೆಳಗ್ಗಿನ ವಾಕಿಂಗ್ ಮುಗಿಸಿ ಬಂದಾಗ ಮನೆಯಲ್ಲಿ ಗುಂಡು ಹಾರಿಸಲಾದ ಸದ್ದು ಅವರ ಪತ್ನಿ ಮತ್ತು ಸೆಕ್ಯುರಿಟಿ ಗಾರ್ಡ್ಗೆ ಕೇಳಿ ಬಂತು. ಒಡನೆಯೇ ಅವರು ಸ್ಥಳಕ್ಕೆ ಧಾವಿಸಿದಾಗ ಸಾಂಖೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು.
ಕೂಡಲೇ ಸಾಂಖೆ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮಡಿದಿರುವುದಾಗಿ ವೈದ್ಯರು ಪ್ರಕಟಿಸಿದರು. ಅಟಾಪ್ಸಿಗಾಗಿ ಸಾಂಖೆ ಅವರ ಮೃತ ದೇಹವನ್ನು ಮುಂಬಯಿಯ ಜೆಜೆ ಆಸ್ಪತ್ರೆಗೆ ಒಯ್ಯಲಾಗಿದೆ.
ಪೊಲೀಸರು ಇದೊಂದು ಆಕಸ್ಮಿಕ ಸಾವೆಂದು ದಾಖಲಿಸಿಕೊಂಡಿದ್ದಾರೆ. ಆದರೂ ಇತರ ಸಾಧ್ಯತೆಗಳನ್ನು ಕೂಡ ತಾವು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು
Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ
Gujarat University;ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ: ಭದ್ರತೆ ಬಿಗಿ
Poll: ಪಶ್ಚಿಮಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ವರ್ಗಾವಣೆ; ಚುನಾವಣಾ ಆಯೋಗ