ಬಂಧಿಸಲು ಬಂದ ಹರಿಯಾಣ Police SI ಗೆ ಗುಂಡೆಸೆದು ಕೊಂದ ಕೊಲೆ ಆರೋಪಿ
Team Udayavani, Nov 16, 2018, 3:57 PM IST
ಚಂಡೀಗಢ : ರೇವಾರಿ ಜಿಲ್ಲೆಯಲ್ಲಿ ಕೊಲೆ ಆರೊಪಿ ಓರ್ವ ಹರಿಯಾಣ ಪೊಲೀಸ್ ಎಸ್ಐ ಓರ್ವರನ್ನು ಗುಂಡಿಕ್ಕಿ ಸಾಯಿಸಿರುವುದಾಗಿ ಅಧಿಕೃತ ವಕ್ತಾರ ತಿಳಿಸಿದ್ದಾರೆ.
ಕೊಲೆ ಆರೋಪಿ ನರೇಶ್ ನನ್ನು ಬಂಧಿಸಲು 49ರ ಹರೆಯದ ಪೊಲೀಸ್ ಅಧಿಕಾರಿ ರಣಬೀರ್ ಸಿಂಗ್ ಹೋಗಿದ್ದಾಗ ಆತ ಎಸ್ಐ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಕೊಂದನೆಂದು ವಕ್ತಾರ ತಿಳಿಸಿದ್ದಾರೆ.
ರಾಜಸ್ಥಾನದ ಗಡಿ ಸಮೀಪದ ಧರುಹೇರಾ-ಭಿವಾಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ಗುಂಡೇಟಿಗೆ ಗುರಿಯಾಗಿದ್ದ ಎಸ್ಐ ಸಿಂಗ್ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮೃಪಟ್ಟಿದ್ದುದಾಗಿ ವೈದ್ಯರು ಪ್ರಕಟಿಸಿದರು.
ಎರಡು ವಾರಗಳ ಹಿಂದಷ್ಟೆ ಕೊಲೆ ಆರೋಪಿ ನರೇಶ್ ದಿಲ್ಲಿ-ಜೈಪುರ ಹೈವೇಯಲ್ಲಿನ ಹೊಟೇಲ್ ಮಾಲಕರೋರ್ವರನ್ನು ಕೊಂದಿದ್ದ; ಮಾತ್ರವಲ್ಲದೆ ಇನ್ನೂ ಅನೇಕ ಕೊಲೆ ಮತ್ತು ಕೊಲೆ ಯತ್ನದ ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ವಕ್ತಾರ ತಿಳಿಸಿದ್ದಾರೆ.
ಮೃತ ಎಸ್ಐ ಅವರ ಕುಟುಂಬಕ್ಕೆ ಮಧ್ಯಾವಧಿ ಪರಿಹಾರವಾಗಿ 30 ಲಕ್ಷ ರೂ. ಘೋಷಿಸಲಾಗಿದೆ. ಇದಲ್ಲದೆ ಕರ್ತವ್ಯದ ಮೇಲೆ ಮೃತಪಟ್ಟರೆ ಸಿಗುವ ವಿಮಾ ಪರಿಹಾರವಾಗಿ ಇನ್ನೂ 30 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ವಕ್ತಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…