ಮೋದಿ ಬಗ್ಗೆ ಹೊಸ ಪುಸ್ತಕ; ಟೀಕೆಗಳಿಗೆ ತಕ್ಕ ಪ್ರತ್ಯುತ್ತರ
Team Udayavani, Nov 18, 2018, 6:00 AM IST
ಹೊಸದಿಲ್ಲಿ: ಕಳೆದ ಐದಾರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲೆಕ್ಕವಿಲ್ಲದಷ್ಟು ಕೃತಿಗಳು ಹೊರ ಬಂದಿವೆ. ಅದರಲ್ಲೂ 2014ರ ಲೋಕಸಭೆ ಚುನಾ ವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೇಲಂತೂ ಅವರ ಸಾಧನೆಯ ಬಗ್ಗೆ ಹಲವು ಪುಸ್ತಕಗಳು ಪ್ರಕಟವಾಗಿವೆ. ಈ ಸಾಲಿಗೆ ಸೇರುವ, ಆದರೆ ಅತ್ಯಂತ ವಿಶಿಷ್ಟವಾದ ಮತ್ತೂಂದು ಕೃತಿ ಇದೀಗ ಸಿದ್ಧವಾಗಿದೆ. “ನರೇಂದ್ರ ಮೋದಿ: ಕ್ರಿಯೇಟಿವ್ ಡಿಸ್ರಪ್ಟರ್ – ದಿ ಮೇಕರ್ ಆಫ್ ದಿ ನ್ಯೂ ಇಂಡಿಯಾ’ ಎಂಬ ಈ ಕೃತಿಯನ್ನು ಲೇಖಕ ಆರ್.ಬಾಲಶಂಕರ್ ರಚಿಸಿದ್ದಾರೆ. ಕನ್ನಡ ಸೇರಿದಂತೆ ಆರಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಕೃತಿ ಬಿಡುಗಡೆಗೊಳ್ಳಲಿದೆ.
ಕಳೆದ ನಾಲ್ಕೂವರೆ ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಚರ್ಚೆಗೆ ಬಂದ ಬಹುತೇಕ ವಿಷಯಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದ್ದು, ಮೋದಿ ವಿರುದ್ಧದ ಎಲ್ಲ ಟೀಕೆಗಳಿಗೂ ಪ್ರತ್ಯುತ್ತರದಂತಿರಲಿದೆ ಎನ್ನಲಾಗಿದೆ. “ಆರ್ಗನೈಸರ್’ ಸಾಪ್ತಾಹಿಕದ ಮಾಜಿ ಸಂಪಾದಕ ಹಾಗೂ ಬಿಜೆಪಿ ಇಂಟಲೆಕುcವಲ್ ಸೆಲ್ನ ಸಂಚಾಲಕರಾಗಿದ್ದ ಬಾಲಶಂಕರ್, ಪ್ರಧಾನಿಯನ್ನಾಗಿ ಮೋದಿ ಆಯ್ಕೆ ಬಗ್ಗೆ ಎದ್ದ ಪ್ರಶ್ನೆಗಳಿಗೂ ಈ ಕೃತಿಯಲ್ಲಿ ಉತ್ತರ ನೀಡಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಪುಸ್ತಕ ಬಿಡುಗಡೆಗೊಳಿಸಲಿದ್ದು, ಅವರೇ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ವಿತ್ತ ಸಚಿವ ಜೇಟ್ಲಿ ಅವರು ಪೀಠಿಕೆ ಬರೆದಿದ್ದಾರೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಪುಸ್ತಕದ ಬಗ್ಗೆ ತನ್ನ ಅಭಿಪ್ರಾಯವನ್ನು ಬರೆದಿದ್ದಾರೆ. ಚುನಾವಣೆಗೂ ಮುನ್ನ ಕನಿಷ್ಠ 1 ಲಕ್ಷ ಪ್ರತಿ ಮಾರಾಟವಾಗುವ ನಿರೀಕ್ಷೆಯಿದೆ.
ಏನಿದೆ ಈ ಪುಸ್ತಕದಲ್ಲಿ?: 300 ಪುಟಗಳ ಈ ಪುಸ್ತಕ ದಲ್ಲಿ 17 ಅಧ್ಯಾಯಗಳಿವೆ. ಸುಮಾರು 40 ಅಪ ರೂಪದ ಫೋಟೋಗಳಿವೆ. ರಾಷ್ಟ್ರೀಯ ಭದ್ರತೆ, ಪ್ರಶಸ್ತಿ ವಾಪಸಿ, ನೋಟು ಅಮಾನ್ಯ, ಅಲ್ಪಸಂಖ್ಯಾತರ ವಿಚಾರ ಗಳು, ಮರುಪಾವತಿಯಾಗದ ಸಾಲ, ರಫೇಲ್ ಒಪ್ಪಂದ, ವಿದೇಶಿ ನೀತಿ, ಅಮಿತ್ ಶಾ ಹಾಗೂ ಮೋದಿ ನಡು ವಿನ ಸಂಬಂಧ ಸೇರಿದಂತೆ ಹಲವು ವಿಷಯಗಳನ್ನು ಇದರಲ್ಲಿ ಮಂಡಿಸಲಾಗಿದೆ.
2014 ರ ನಂತರ ಕಂಡುಬಂದ ಪ್ರಮುಖ ಬದಲಾವಣೆಯೆಂದರೆ, ಜನರಿಗೆ ಈಗ ಸರಕಾರ ಒಂದು ಕ್ಲಿಕ್, ಒಂದು ಫೋನ್ ಕಾಲ್, ಒಂದು ಟ್ವೀಟ್ನಷ್ಟೇ ಹತ್ತಿರ ವಾಗಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸು ತ್ತೇನೆ ಎಂದು 1984ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹೇಳಿದ್ದರು. ಇದು 2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಂದಿನಿಂದ ಕೊನೆ ಗೊಂಡಿತು ಎಂದು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.
“ನರೇಂದ್ರ ಮೋದಿ: ಕ್ರಿಯೇಟಿವ್ ಡಿಸ್ರಪ್ಟರ್ – ದಿ ಮೇಕರ್ ಆಫ್ ದಿ ನ್ಯೂ ಇಂಡಿಯಾ’ ಹೆಸರಿನ ಕೃತಿ
ಡಿಸೆಂಬರ್ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಂದ ಬಿಡುಗಡೆ
ಚುನಾವಣೆಗೂ ಮುನ್ನ 1 ಲಕ್ಷ ಪ್ರತಿ ಮಾರಾಟದ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ