ಬಿಜೆಪಿ ಹಣಿಯಲು ಮಹಾ ಘಟಬಂಧನ: ಕೋಲ್ಕತಕ್ಕೆ ಬಂದ TDP ನಾಯ್ಡು
Team Udayavani, Nov 19, 2018, 5:17 PM IST
ಕೋಲ್ಕತ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಹಣಿಯಲು ಮಹಾ ಘಟಬಂಧನವನ್ನು ರೂಪಿಸುವ ಅಭಿಯಾನದಲ್ಲಿ ನಿರತರಾಗಿರುವ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಂದು ಪಶ್ಚಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಾಣಲು ಕೋಲ್ಕತಕ್ಕೆ ಆಗಮಿಸಿದರು.
ನಾಯ್ಡು ಅವರು ಮಮತಾ ಅವರನ್ನು ಇಂದು ಸಂಜೆ ನಬನ್ನಾದಲ್ಲಿ ಭೇಟಿಯಾಗುವರೆಂದು ಎಎನ್ಐ ವರದಿ ಮಾಡಿದೆ.
ಮಮತಾ ಭೇಟಿಗೆ ಮುನ್ನ ನಾಯ್ಡು ಅವರು ಮಹಾಘಟಬಂಧನ ರಚನಾರ್ಥವಾಗಿ ಈಗಾಗಲೇ ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ.
ಮಮತಾ ಅವರ ಭೇಟಿಯ ಬಳಿಕ ನಾಯ್ಡು ಅವರು ಪ್ರಸ್ತಾವಿತ ಮಹಾಘಟಬಂಧನದ ಎಲ್ಲ ಮಿತ್ರ ಪಾಲುದಾರರನ್ನು ನ.22ರಂದು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ