ಜಮ್ಮು ಕಾಶ್ಮೀರ : ಪಿಡಿಪಿ, ಕಾಂಗ್ರೆಸ್, ಎನ್ಸಿ ಸಮ್ಮಿಶ್ರ ಸರಕಾರ ?
Team Udayavani, Nov 21, 2018, 12:20 PM IST
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಜನಪ್ರಿಯ ಸರಕಾರವನ್ನು ರಚಿಸುವ ದಿಶೆಯಲ್ಲಿ ಪರಸ್ಪರ ಬದ್ಧ ವೈರಿಗಳಾಗಿರುವ ಪಿಡಿಪಿ, ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಜತೆಗೂಡುವ ಸಾಧ್ಯತೆಗಳು ಈಗ ತೋರಿಬರುತ್ತಿವೆ.
ಒಂದೊಮ್ಮೆ ಈ ಘಟಬಂಧನ ಸಾಧ್ಯವಾಯಿತೆಂದರೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ; ಬದಲು ಪಿಡಿಪಿಯ ಯಾವುದಾದರೂ ಹಿರಿಯ ನಾಯಕರೋರ್ವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಪ್ರಕೃತ ರಾಜ್ಯಪಾಲರ ಆಡಳಿತೆಯಲ್ಲಿದೆ. ಇದೇ ವರ್ಷ ಡಿ.19ರಂದು ರಾಜ್ಯಪಾಲರ ಆಡಳಿತೆಯ ಮೊದಲ 6 ತಿಂಗಳ ಮುಗಿದಾಗ ಅದನ್ನು ಮತ್ತೆ ಹೊಸ ಅವಧಿಗೆ ಮುಂದುವರಿಸುವ ಸಾಧ್ಯತೆ ಇದೆ.
ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಪ್ರಸ್ತಾಪ ಇದೆಯಾದರೂ 87 ಸದಸ್ಯ ಬಲದ ರಾಜ್ಯ ವಿಧಾನಸಭೆಯನ್ನು ಇನ್ನೂ ವಿಸರ್ಜಿಸಲಾಗಿಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳುತ್ತಾರೆ.
ಕಳೆದ ಜೂ.16ರಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ಸರಕಾರದ ಪಾಲುದಾರ ಪಕ್ಷವಾಗಿರುವ ಬಿಜೆಪಿ ಅಸಮಾಧಾನ, ಅತೃಪ್ತಿಯ ಕಾರಣಕ್ಕೆ ಸರಕಾರದಿಂದ ಹೊರಬಂದಿತ್ತು.
ಈ ನಡುವೆ ಪೀಪಲ್ ಕಾನ್ಫರೆನ್ಸ್ನ ಸಜ್ಜದ್ ಲೋನ್ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಪೀಪಲ್ ಕಾನ್ಫರೆನ್ಸ್ ಕೇವಲ ಎರಡನೇ ಶಾಸಕರನ್ನು ಹೊಂದಿದೆ; ಆದರೆ ಸರಕಾರ ರಚಿಸಲು ಅದಕ್ಕೆ ಬಿಜೆಪಿಯ 25 ಶಾಸಕರ ಬೆಂಬಲ ಸಿಗಲಿದೆ.
ಹಾಗಿದ್ದರೂ ಸರಕಾರ ರಚನೆಗೆ ಅವಶ್ಯವಿರುವ 44 ಸದಸ್ಯರ ಮ್ಯಾಜಿಕ್ ಸಂಖ್ಯೆಯನ್ನು ಪಿಡಿಪಿ ವಿಭಜನೆಯ ಮೂಲಕ ಸಾಧಿಸುವ ಯತ್ನವೂ ಒಳಗಿಂದೊಳಗೇ ಸಾಗುತ್ತಿದೆ ಎನ್ನಲಾಗಿದೆ. ಪಿಡಿಪಿ ಯೊಳಗೆ ನಾಯಕತ್ವದ ವಿರುದ್ಧ ಭಿನ್ನಮತ, ಬಂಡಾಯ ಅಡಗಿದ್ದು ಅದು ಯಾವ ಹೊತ್ತಿನಲ್ಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ