9 ಬಾಲಕಿಯರ ರೇಪ್, ಹತ್ಯೆ; ವಿಕೃತ ಕಾಮಿ ರಾಕ್ಷಸ ಕೊನೆಗೂ ಅರೆಸ್ಟ್
Team Udayavani, Nov 22, 2018, 10:28 AM IST
ಹೊಸದಿಲ್ಲಿ: ಗುರುಗ್ರಾಮ್ ಸೆಕ್ಟರ್ 66 ರಲ್ಲಿ ಮೂರು ವರ್ಷದ ಬಾಲಕಿಯ ರೇಪ್ ಮತ್ತು ಹತ್ಯೆ ನಡೆದ ಬಳಿಕ ರಾಕ್ಷಸ ರೂಪದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ 20 ರ ಹರೆಯದ ಸುನೀಲ್ ಕುಮಾರ್ ಎನ್ನುವ ವಿಕೃತ ಶಿಶುಕಾಮಿಯಾಗಿದ್ದು, ಮೂರರಿಂದ 7 ವರ್ಷದೊಳಗಿನ 9 ಮಂದಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಗುರುಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಮರದ ಕೋಲನ್ನು ಇರಿದು, ಇಟ್ಟಿಗೆಯಿಂದ ತಲೆ ಒಡೆದು ಮೃಗೀಯವಾಗಿ ವರ್ತಿಸಿ ಭೀಕರವಾಗಿ ಹತ್ಯೆಗೈದಿದ್ದ.ಬಾಲಕಿಯ ಶವ ದೇಹದ ತುಂಬೆಲ್ಲಾ ಗಾಯಗಳಿಂದ ಕೂಡಿದ್ದು, ಪ್ಲಾಸ್ಟಿಕ್ ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂರು ರಾಜ್ಯಗಳಲ್ಲಿ ಈತನಿಗಾಗಿ ವ್ಯಾಪಕ ಶೋಧ ನಡೆಸಿದ್ದರು.
ರಾಕ್ಷಸಿ ಕೃತ್ಯ ಎಸಗುತ್ತಿದ್ದ ಸುನೀಲ್ ಕುಮಾರ್ ಅತ್ಯಾಚಾರ ಎಸಗುವ ಮುನ್ನ ಮಕ್ಕಳ ಕಾಲನ್ನು ಮುರಿಯುತ್ತಿದ್ದ ಎನ್ನುವ ಬೆಚ್ಚಿ ಬೀಳುವ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ದೆಹಲಿಯಲ್ಲಿ 4, ಗುರುಗ್ರಾಮ್ನಲ್ಲಿ 3, ಝಾನ್ಸಿ ಮತ್ತು ಗ್ವಾಲಿಯರ್ನಲ್ಲಿ ತಲಾ 1 ಕೇಸು ದಾಖಲಾಗಿದೆ.
ನಿರುದ್ಯೋಗಿಯಾಗಿದ್ದ ಈತ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಪುಟ್ಟ ಬಾಲಕಿಯರಿಗೆ ಚಾಕಲೇಟು ಮತ್ತು ಸಿಹಿ ತಿಂಡಿಗಳ ಆಮಿಷ ನೀಡಿ ಅಪಹರಿಸಿ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮ್ನಲ್ಲಿ ನೆವೆಂಬರ್ 11 ರಂದು ಇದೇ ರೀತಿ ಬಾಲಕಿಗೆ ಚಾಕಲೇಟ್ ಆಮಿಷ ನೀಡಿ ಸ್ಲಂಗೆ ಎಳೆದೊಯ್ದು ಕೋಣೆಯೊಂದರಲ್ಲಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆಗೈದಿದ್ದ.
ಗುರುಗ್ರಾಮಕ್ಕೆ ತಾಯಿ ಮತ್ತು ಸಹೋದರಿಯನ್ನು ಭೇಟಿಯಾಗಲು ಬಂದಿದ್ದ ವೇಳೆ ಕೃತ್ಯ ಎಸಗಿ ಹುಟ್ಟೂರಾದ ಝಾನ್ಸಿಗೆ ಪರಾರಿಯಾಗಿದ್ದ.
ಬಂಧನದ ಬಳಿಕ ಸುನೀಲ್ ಕುಮಾರ್ಗೆ ಕೋರ್ಟ್ 8 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈಗಾಗಲೆ 3 ಬಾಲಕಿಯರ ಹತ್ಯೆ ಕೇಸ್ಗಳನ್ನು ಈತನ ಮೇಲೆ ಲಿಂಕ್ ಮಾಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ