ವರದಕ್ಷಿಣೆ ಕಿರುಕುಳ : ಕಾಂಗ್ರೆಸ್ ಮೇಯರ್ ಅಭ್ಯರ್ಥಿ, ಪತಿ ಬಂಧನ
Team Udayavani, Nov 22, 2018, 4:58 PM IST
ಕಾಶೀಪುರ : ಸೊಸೆ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಕೇಸಿಗೆ ಸಂಬಂಧಪಟ್ಟ ಪೊಲೀಸರು ಕಾಂಗ್ರೆಸ್ ಪಕ್ಷದ ಕಾಶೀಪುರ ಮೇಯರ್ ಅಭ್ಯರ್ಥಿ ಮುಕ್ತಾ ಸಿಂಗ್ ಮತ್ತು ಆಕೆಯ ಪತಿ ರವೀಂದ್ರ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಈ ಬಂಧನ ರಾಜಕೀಯ ಪ್ರೇರಿತವಾದುದೆಂದು ಆರೋಪಿಸಿ ಕಾಂಗ್ರೆಸ್ ಪಕ್ಷ ತೀವ್ರ ಪ್ರತಿಭಟನೆ ನಡೆಸಿದೆ.
ಸೊಸೆ ಪ್ರಿಯಾಂಕಾ ಅವರು ಕಳೆದ ಸೆ.28ರಂದು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಕೇಸಿಗೆ ಸಂಬಂಧಿಸಿ ಅತ್ತೆ ಮುಕ್ತಾ ಸಿಂಗ್ ಮತ್ತು ಮಾವ ರವೀಂದ್ರ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಡಿಎಸ್ಪಿ ರಾಜೇಶ್ ಭಟ್ ತಿಳಿಸಿದ್ದಾರೆ.
ಬಂಧನವನ್ನು ಪ್ರತಿಭಟಿಸಿ ಕಾಂಗ್ರೆಸ್ ಕೋತ್ವಾಲಿ ಎದುರುಗಡೆ ಧರಣಿ ನಡೆಸಿತು. ಧರಣಿ ನೇತೃತ್ವ ವಹಿಸಿದ ಮಾಜಿ ಸಂಸದ ಕೆ ಸಿ ಸಿಂಗ್ ಬಾಬಾ ಅವರು “ಇದು ಬಿಜೆಪಿ ನಡೆಸಿರುವ ರಾಜಕೀಯ ದ್ವೇಷ ಸಾಧನೆಯ ಕ್ರಮವಾಗಿದೆ’ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ