ಡಿಸೆಂಬರ್ 3ರಿಂದ ಮುಷ್ಕರಕ್ಕೆ ಬಿಎಸ್ಸೆನ್ನೆಲ್ ನೌಕರರು ಸಜ್ಜು
Team Udayavani, Nov 29, 2018, 7:03 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ಖಾಸಗಿ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ ನೆರವಾಗುತ್ತಿದ್ದು ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ಬಿಎಸ್ಎನ್ಎಲ್ ಉದ್ಯೋಗಿಗಳು ಡಿ.3ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜಿಯೋಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ಗೆ ಸರಕಾರ 4ಜಿ ತರಂಗಾಂತರಗಳನ್ನೂ ನೀಡಲಿಲ್ಲ. ಜಿಯೋದಿಂದ ಇಡೀ ಟೆಲಿಕಾಂ ಉದ್ಯಮ ಸಂಕಷ್ಟದಲ್ಲಿದೆ. ಪ್ರತಿಸ್ಪರ್ಧಿಗಳನ್ನು ನಿರ್ಮೂಲನೆ ಮಾಡಲು ಜಿಯೋ ಯೋಜನೆ ರೂಪಿಸಿದೆ. ಈಗಾಗಲೇ ಏರ್ಸೆಲ್, ಟಾಟಾ ಟೆಲಿ ಸರ್ವೀಸಸ್, ರಿಲಯನ್ಸ್ ಕಮ್ಯುನಿಕೇಶನ್ಗಳು ಮುಚ್ಚಿವೆ ಎಂದು ನೌಕರರ ಸಂಘ ಎಯುಎಬಿ ತಿಳಿಸಿದೆ. 4ಜಿ ತರಂಗಾಂತರಗಳನ್ನು ಬಿಎಸ್ಎನ್ಎಲ್ಗೆ ಒದಗಿಸಬೇಕು ಎಂಬ ಬೇಡಿಕೆಗೆ ಸರಕಾರ ಕಿವಿಗೊಟ್ಟಿಲ್ಲ. ಹೀಗಾಗಿ ಸ್ಪರ್ಧೆಯಲ್ಲಿ ಬಿಎಸ್ಎನ್ಎಲ್ ಹಿಂದುಳಿಯಬೇಕಾಯಿತು ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು