“ಫ್ರೆಂಚ್‌ ಕ್ರಾಂತಿ’ಗೆ ತುರ್ತು ಪರಿಸ್ಥಿತಿಯ ಅಸ್ತ್ರ?


Team Udayavani, Dec 3, 2018, 9:28 AM IST

french.jpg

ಪ್ಯಾರಿಸ್‌: 17ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ರಾಜಪ್ರಭುತ್ವವನ್ನು ಕಿತ್ತೂಗೆದು ಜನತಂತ್ರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟ “ಫ್ರೆಂಚ್‌ ಕ್ರಾಂತಿ’ ಈಗ ಆ ದೇಶದಲ್ಲಿ ಬೇರೊಂದು ಕಾರಣಕ್ಕಾಗಿ ಮತ್ತೂಮ್ಮೆ ಮರುಕಳಿಸಿದೆ. ತೈಲಗಳ ಮೇಲೆ ತೆರಿಗೆ ಹೆಚ್ಚಳ, ಗಣನೀಯವಾಗಿ ಏರುತ್ತಿರುವ ಜೀವನ ನಿರ್ವಹಣಾ ವೆಚ್ಚಗಳ ವಿರುದ್ಧ ಫ್ರಾನ್ಸ್‌ ಜನತೆ ಸಿಡಿದೆದ್ದಿದ್ದು ಅವರ ಚಳವಳಿ ಗಳು ಹಿಂಸಾ ಸ್ವರೂಪ ಪಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್‌ ಸರಕಾರ, ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಆಲೋಚಿಸಿದೆ. 

“ಯೆಲ್ಲೋ ವೆಸ್ಟ್‌’ ಕಿಚ್ಚು: ನ.17ರಂದು ಆರಂಭ ವಾಗಿರುವ “ಯೆಲ್ಲೋ ವೆಸ್ಟ್‌’ ಹೆಸರಿ ನಲ್ಲಿ ನಡೆಯುತ್ತಿರುವ ರ್ಯಾಲಿಗಳಲ್ಲಿ ಲಕ್ಷಾಂತರ ಯುವಜನರು ತಿಳಿ ಹಳದಿ ಬಣ್ಣದ ವೆಸ್ಟ್‌ ಕೋಟ್‌ಗಳನ್ನು ಧರಿಸಿ ಪ್ರತಿಭಟನೆಗಿಳಿ ಯುತ್ತಿದ್ದಾರೆ. ಹಾಗಾಗಿ, “ಯೆಲ್ಲೋ ವೆಸ್ಟ್‌’ ಎಂಬುದು ಚಳವಳಿಯ ರೂಪ ತಳೆದಿದೆ. ಆದರೆ, ಈ ಚಳವಳಿ ಕೆಲವು ಕಿಡಿಗೇಡಿಗಳಿಂದ ಆಗಾಗ ಹಿಂಸಾಚಾರಕ್ಕೂ ತಿರುಗುತ್ತಿರುವುದು ಸರಕಾರದ ನಿದ್ದೆಗೆಡಿಸಿದೆ. ಹಿಂಸಾಚಾರದ ವೇಳೆ ದರೋಡೆಕೋರರು, ಶಾಪಿಂಗ್‌ ಮಾಲ್‌ ಸೇರಿದಂತೆ ಹಲವಾರು ವಾಣಿಜ್ಯ ಕೇಂದ್ರ ಗಳನ್ನು ಲೂಟಿ ಮಾಡುತ್ತಿದ್ದಾರೆ.  

ಶನಿವಾರದ ಹಿಂಸೆ:  ಪ್ಯಾರಿಸ್‌ ನಗರದ ಕೇಂದ್ರ ಭಾಗದಲ್ಲಿ ಶನಿವಾರ ನಡೆದ ಇಂಥದ್ದೇ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ಹಲ ವಾರು ವಾಹನಗಳಿಗೆ, ಕಟ್ಟಡಗಳಿಗೂ ಅಗ್ನಿ ಸ್ಪರ್ಶ ಮಾಡಿ ಅಪಾರ ಪ್ರಮಾಣದ ಸಾರ್ವ ಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದ್ದಾರೆ. ಈ ಘಟನೆಯಲ್ಲಿ 20 ಪೊಲೀಸ್‌ ಸಿಬಂದಿ ಸೇರಿ ದಂತೆ 110 ಜನರು ಗಾಯಗೊಂಡಿದ್ದಾರೆ. 224 ಜನರನ್ನು ಬಂಧಿಸಲಾಗಿದೆ. 

ಒತ್ತಡದಲ್ಲಿ ಸರಕಾರ: ಇಂಥ ಹಲವಾರು ಘಟನೆಗಳಿಂದ ಬೇಸತ್ತಿರುವ ಸರಕಾರ ತುರ್ತು ಪರಿಸ್ಥಿತಿ ಬಗ್ಗೆ ಚಿಂತನೆ ನಡೆಸಿದೆ ಎಂದು ಸರಕಾರದ ವಕ್ತಾರ ಬೆಂಜಮಿನ್‌ ಗ್ರೀವಾಕ್ಸ್‌ ತಿಳಿಸಿದ್ದಾರೆ. ಆದರೂ, ಶಾಂತಿ ಯುತ ವಾಗಿ ಪ್ರತಿಭಟನೆ ಮಾಡುವವರ ಜತೆಗೆ ಮಾತುಕತೆ ನಡೆಸಲು ಸರಕಾರ ಸಿದ್ಧ ವಿದೆ ಎಂದೂ ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ರವಿವಾರ, ಫ್ರಾನ್ಸ್‌ ಅಧ್ಯಕ್ಷ ಎಮಾ ನ್ಯುಯೆಲ್‌ ಮಕ್ರೊನ್‌ ಅವರು ಪ್ರಧಾನಿ ಎಡೆಲ್ಡ್‌ ಫಿಲಿಪ್ಪೆ ಹಾಗೂ ಕ್ರಿಸ್ಟೊಫೆ ಕ್ಯಾಸ್ಟನರ್‌ ಅವರೊಂದಿಗೆ ತುರ್ತು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.