ಆಯ್ಕೆ ಸಮಿತಿ ಜತೆ ಚರ್ಚಿಸದೆ ಆಲೋಕ್ಗೆ ರಜೆ ಕೊಟ್ಟದ್ದೇಕೆ: ಸುಪ್ರೀಂ
Team Udayavani, Dec 6, 2018, 12:05 PM IST
ಹೊಸದಿಲ್ಲಿ : ಸಿಬಿಐ ವರ್ಸಸ್ ಸಿಬಿಐ ‘ಬೆಕ್ಕುಗಳ ಕಾದಾಟ’ದಲ್ಲಿ ಶಾಮೀಲಾಗಿದ್ದ ಆಲೋಕ್ ವರ್ಮಾ ಅವರನ್ನು ರಜೆಯಲ್ಲಿ ಕಳಿಸುವ ಮುನ್ನ ಆಯ್ಕೆ ಸಮಿತಿಯ ಜತೆಗೆ ಏಕೆ ಸಮಾಲೋಚಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಆಲೋಕ್ ವರ್ಮಾ ಮತ್ತು ಸಿಬಿಐ ನಂಬರ್ 2 ಆಗಿರುವ ರಾಕೇಶ್ ಆಸ್ಥಾನಾ ಅವರ ಒಳಜಗಳದಿಂದ ಸಿಬಿಐ ಘನತೆ, ಗೌರವ, ಪ್ರತಿಷ್ಠೆ ಮಣ್ಣುಪಾಲಾಗಿತ್ತು ಎಂದು ಈ ಮೊದಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.
ಸಿಬಿಐ ಮುಖ್ಯಸ್ಥ ಆಲೋಕ್ ವರ್ಮಾ ಅವರ ಅಧಿಕಾರಗಳನ್ನು ಕಿತ್ತು ಹಾಕುವ ಮುನ್ನ ಆಯ್ಕೆ ಸಮಿತಿಯನ್ನು ಸಮಾಲೋಚಿಸಬೇಕಿತ್ತು; ಆದರೆ ಸರಕಾರ ಯಾಕೆ ಹಾಗೆ ಮಾಡದೆ ಲೋಪ ಎಸಗಿತು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿತು.
ವರ್ಮಾ ಮತ್ತು ಆಸ್ಥಾನಾ ನಡುವಿನ ಜಗಳ ರಾತ್ರೋರಾತ್ರಿ ನಡೆದುದಲ್ಲ; ಅದಕೆ ದೀರ್ಘ ಇತಿಹಾಸವೂ ಇದ್ದಿರಬಹುದು. ಆದುದರಿಂದ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮುನ್ನ ಸರಕಾರ ಆಯ್ಕೆ ಸಮಿತಿಯೊಡನೆ ಸಮಾಲೋಚಿಸಬೇಕಿತ್ತು ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ