ಪುದುಚೇರಿಯಲ್ಲೊಂದು “ಕಡಲೂರು’; ಸಮುದ್ರದಾಳದ ಮ್ಯೂಸಿಯಂ


Team Udayavani, Dec 10, 2018, 9:52 AM IST

cudaluru.jpg

ಪುದುಚೇರಿ: ದೇಶದ ಪ್ರಥಮ ಸಮುದ್ರದಾಳದ ಮ್ಯೂಸಿಯಂ ಪುದುಚೇರಿಯಲ್ಲಿ ನಿರ್ಮಾಣವಾಗಲಿದ್ದು, ಕಳೆದ ಮಾರ್ಚ್‌ನಲ್ಲಿ ಸೇನೆಯಿಂದ ನಿವೃತ್ತಗೊಂಡ ಐಎನ್‌ಎಸ್‌ ಕಡಲೂರು ನೌಕೆಯನ್ನು ಪುದುಚೇರಿಯಿಂದ 7 ಕಿ.ಮೀ. ದೂರದಲ್ಲಿ ಸಮುದ್ರದಾಳದಲ್ಲಿ ಮುಳುಗಿಸಲಾಗುತ್ತದೆ. 60 ಮೀಟರ್‌ ಉದ್ದ ಹಾಗೂ 12 ಮೀಟರ್‌ ಅಗಲದ ನೌಕೆ ಇದಾಗಿದ್ದು, ಸಮುದ್ರದಲ್ಲಿ ಮುಳುಗಿಸಿದ ಸ್ವಲ್ಪ ದಿನಗಳಲ್ಲೇ ಈ ನೌಕೆಯನ್ನು ಜಲಚರಗಳು ತಮ್ಮ ವಾಸಸ್ಥಾನವನ್ನಾಗಿಸಿಕೊಳ್ಳಲಿವೆ. ಸಾಹಸ ಪ್ರವೃತ್ತಿಯ ಪ್ರವಾಸಿಗರು ಇಲ್ಲಿಗೆ ಈಜಿಕೊಂಡು ಹೋಗಿ ಮ್ಯೂಸಿಯಂ ವೀಕ್ಷಿಸಬಹುದು. ಡೈವಿಂಗ್‌ ಹಾಗೂ ಸ್ನೋರ್ಕಿಂಗ್‌ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ.

ಡೈವಿಂಗ್‌ ಮಾಡುವವರು ಒಳಗೆ ಹೊರಗೆ ಸಂಚರಿಸಲು ಅನುಕೂಲವಾಗುವಂತೆ ಹಡಗಿನ ಕೆಲವು ಬಾಗಿಲುಗಳನ್ನು ಒಡೆಯಲಾಗುತ್ತದೆ. ಈ ಮ್ಯೂಸಿಯಂಗೆ ತೆರಳಲು ಜಲ ಮಾರ್ಗವನ್ನೂ ನಿಗದಿಸಲಾಗುತ್ತದೆ. ರಕ್ಷಣಾ ದಿರಿಸು ತೊಟ್ಟು ಪ್ರವಾಸಿಗರು ಬೋಟ್‌ನಲ್ಲಿ ಮ್ಯೂಸಿಯಂ ಸ್ಥಳಕ್ಕೆ ತೆರಳಿ, ಇಲ್ಲಿಂದ ಡೈವ್‌ ಮಾಡಬಹುದು. 26 ಮೀಟರ್‌ ಆಳದಲ್ಲಿ ಮ್ಯೂಸಿಯಂ ಇರಲಿದ್ದು, ಅಷ್ಟು ಆಳದವರೆಗೆ ಡೈವ್‌ ಮಾಡಲು ಬಯಸದವರು, ಸ್ನಾರ್ಕೆಲ್‌ ಮೂಲಕ ಕೆಲವೇ ಮೀಟರುಗಳ ದೂರದಿಂದಲೇ ಮ್ಯೂಸಿಯಂ ಕಣ್ತುಂಬಿಕೊಳ್ಳಬಹುದು.

ನೈಸರ್ಗಿಕ ಮ್ಯೂಸಿಯಂ: ನೌಕಾಪಡೆ ಐಎನ್‌ಎಸ್‌ ಕಡಲೂರು ಯುದ್ಧ ಹಡಗನ್ನು ಮುಳುಗಿಸಿದ ಸ್ವಲ್ಪ ದಿನಗಳಲ್ಲೇ ನೀರಿನಲ್ಲಿರುವ ಲವಣಾಂಶದಿಂದ ಹಡಗಿನ ಸ್ಟೀಲ್‌ ತುಕ್ಕು ಹಿಡಿಯುತ್ತದೆ. ಪ್ರೊಟೀನ್‌ ಹಾಗೂ ಪಾಲಿಸ್ಯಾಶಿರೈಡ್‌ನ‌ಂತಹ ರಾಸಾಯನಿಕಗಳು ಹಡಗಿನ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತವೆ. ಇದನ್ನೇ ಆಹಾರವಾಗಿಸಿಕೊಂಡು ಸೂಕ್ಷ್ಮ ಜೀವಿಗಳು, ಸಸ್ಯಗಳು ಹಾಗೂ ಬ್ಯಾಕ್ಟೀರಿಯಾ ಬೆಳೆಯುತ್ತವೆ. ನಂತರದಲ್ಲಿ ಮೀನುಗಳಿಗೆ ಇದು ಸಂತಾನ ವೃದ್ಧಿಗೆ ಉತ್ತಮ ಸ್ಥಳವೂ ಆಗಲಿದೆ. ದೊಡ್ಡ ಹಾಗೂ ಸಣ್ಣ ಮೀನುಗಳು ಇಲ್ಲಿ ವಾಸ ಮಾಡುತ್ತವೆ. ಹೀಗಾಗಿ ಇದು ನೈಸರ್ಗಿಕವಾದ ಮ್ಯೂಸಿಯಂ ಆಗಿರಲಿದೆ.

ಎನ್‌ಜಿಒ ಹಾಗೂ ಸರಕಾರದ ಸಹಭಾಗಿತ್ವ: ಸಮುದ್ರ ದಾಳದಲ್ಲಿ ಮ್ಯೂಸಿಯಂ ನಿರ್ಮಿಸುವ ಯೋಜನೆಯು ಚೆನ್ನೈ ಮೂಲದ ಎರಡು ರಾಷ್ಟ್ರೀಯ ಲ್ಯಾಬೊರೇಟರಿಗಳು, ಎನ್‌ಜಿಒ ಪಾಂಡಿ ಕ್ಯಾನ್‌ ಹಾಗೂ ಪುದುಚೇರಿ ಸರಕಾರದ ಜಂಟಿ ಯೋಜನೆಯಾಗಿರಲಿದೆ. ಸದ್ಯ ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ನಿರೀಕ್ಷಿ ಸುತ್ತಿದೆ. ಈ ಅನುಮತಿ ಸಿಕ್ಕ ನಂತರದಲ್ಲಿ ಸೇನೆಯೇ ಹಡಗನ್ನು ಮುಳುಗಿಸಲಿದೆ. ಸೇನೆಗೆ ಹಡಗು ನಿರ್ವಹಣೆಯಲ್ಲಿ ಪರಿಣಿತಿ ಇರುವುದರಿಂದ ಈ ಕೆಲಸ ಸುಲಭವಾಗಲಿದೆ.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.