ಸಂಸತ್ತಿನ ಚಳಿಗಾಲದ ಅಧಿವೇಶನ: ಎಲ್ಲ ವಿಷಯ ಚರ್ಚೆಗೆ ಸಿದ್ಧ: ಪ್ರಧಾನಿ
Team Udayavani, Dec 10, 2018, 3:30 PM IST
ಹೊಸದಿಲ್ಲಿ : ನಾಳೆ ಮಂಗಳವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಅದಕ್ಕೆ ಮುನ್ನ ಸರಕಾರ ಸರ್ವ ಪಕ್ಷ ಸಭೆ ಕರೆದಿದ್ದು ವಿಪಕ್ಷಗಳ ಜತೆಗೆ ಎಲ್ಲ ವಿಷಯಗಳ ಚರ್ಚೆಗೆ ನಾವು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ವಿರೋಧ ಪಕ್ಷಗಳು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ನಾವು ಚರ್ಚೆಗೆ ಸಿದ್ಧ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನ ಫಲಪ್ರದವೂ ರಚನಾತ್ಮಕವೂ ಆಗಿರುವುದೆಂದು ಹಾರೈಸುತ್ತೇನೆ. ಎಲ್ಲ ಪಕ್ಷಗಳಿಂದ ಸಂಸತ್ ಕಲಾಪ ಯಶಸ್ವಿಗೆ ಪೂರ್ಣ ಬೆಂಬಲ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಅವರು ಉನ್ನತ ವಿಪಕ್ಷ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದರು.
ಅಗತ್ಯ ಬಿದ್ದರೆ ತಡ ಸಂಜೆಯ ವರೆಗೂ ಮುಖ್ಯ ಮಸೂದೆಗಳನ್ನು ನಾವು ಪಾಸು ಮಾಡುವೆವು ಎಂದು ಪ್ರಧಾನಿ ಹೇಳಿದರು.
ಆದರೆ ಪ್ರಧಾನಿಯವರ ಈ ಮಾತುಗಳಿಂದ ಸಂತುಷ್ಟಗೊಳ್ಳದ ವಿರೋಧ ಪಕ್ಷ, ರಫೇಲ್ ಜೆಟ್ ಡೀಲ್ ಕುರಿತಾಗಿ ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಆಗ್ರಹಿಸುವುದಾಗಿ ಹೇಳಿದೆ.
ಉನ್ನತ ಕೇಂದ್ರ ತನಿಖಾ ದಳಗಳ ದುರುಪಯೋಗ, ಆರ್ಬಿಐ ಸ್ವಾಯತ್ತೆಯೇ ಮೊದಲಾದ ಇನ್ನೂ ಅನೇಕ ವಿಷಯಗಳನ್ನು ವಿರೋಧ ಪಕ್ಷಗಳು ಸಭೆಯಲ್ಲಿ ಎತ್ತಿದವು. ಇವೆಲ್ಲವನ್ನೂ ತಾವು ಮಂಗಳವಾರದಿಂದ ಆರಂಭಗೊಳ್ಳುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಎತ್ತುವುದಾಗಿ ಹೇಳಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ