ಅಮಿತಾವ್ಗೆ ಜ್ಞಾನಪೀಠ ಪ್ರಶಸ್ತಿ
Team Udayavani, Dec 15, 2018, 8:10 AM IST
ಹೊಸದಿಲ್ಲಿ: ಇಂಗ್ಲಿಷ್ ಸಾಹಿತ್ಯ ಕ್ಷೇತ್ರದ ಲೇಖಕ, ಕಾದಂಬರಿಗಾರ ಅಮಿತಾವ್ ಘೋಷ್ ಅವರು ಪ್ರಸಕ್ತ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕಾಗಿ ಅವರು ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಪ್ರಶಸ್ತಿ ನೀಡುವ ಭಾರತೀಯ ಜ್ಞಾನಪೀಠ ಸಂಸ್ಥೆ ಶುಕ್ರವಾರ ಹೇಳಿದೆ. ಖ್ಯಾತ ಕಾದಂಬರಿಗಾರ್ತಿ ಪ್ರತಿಭಾ ರಾಯ್ ನೇತೃತ್ವದ ಆಯ್ಕೆ ಸಮಿತಿ ಘೋಷ್ ಹೆಸರನ್ನು ಅಂತಿಮಪಡಿಸಿತು.
‘ಘೋಷ್ ತಮ್ಮ ಕಾದಂಬರಿಗಳ ಮೂಲಕ ಐತಿಹಾಸಿಕ ಕ್ಷಣಗಳನ್ನು ಆಧುನಿಕ ಕಾಲಘಟ್ಟಕ್ಕೆ ಸರಿಯಾಗುವಂತೆ ವಿವರಿಸಿದ್ದಾರೆ. ಕಾದಂಬರಿಯಲ್ಲಿ ವಿಷಯದ ಬಗ್ಗೆ ಅಸಾಧಾರಣ ಆಳ ಮತ್ತು ಜ್ಞಾನವನ್ನೂ ನೀಡುವಂತೆ ಬರೆಯುವುದರ ಮೂಲಕ ತಾವು ಸಮರ್ಥ ಇತಿಹಾಸಕಾರ ಮತ್ತು ಸಾಮಾಜಿಕ ಮಾನವ ಶಾಸ್ತ್ರಜ್ಞ ಎಂಬುದನ್ನು ಸಾಬೀತುಮಾಡಿದ್ದಾರೆ’ ಎಂದು ಸಂಸ್ಥೆ ಹೇಳಿದೆ.
ತಮ್ಮ ಆಯ್ಕೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಘೋಷ್, ‘ಆದರಗೊಂಡಿದ್ದೇನೆ ಮತ್ತು ವಿನೀತಗೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. 1956ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಅವರು ‘ಶಾಡೋ ಲೈನ್ಸ್’, ‘ದ ಗ್ಲಾಸ್ ಪ್ಯಾಲೇಸ್’, ‘ದ ಹಂಗ್ರಿ ಟೈಡ್’ ಸೇರಿದಂತೆ ಹಲವು ಜನಪ್ರಿಯ ಕೃತಿಗಳನ್ನು ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ