ಸಾಲ ತೀರಿಸಲು ಒಲ್ಲೆನೆಂದ ಸ್ನೇಹಿತನ ತಲೆ ಕಡಿದು ಕೊಂದ ಫ್ರೆಂಡ್ಸ್
Team Udayavani, Dec 18, 2018, 7:02 PM IST
ಹೊಸದಿಲ್ಲಿ : ತಮ್ಮಿಂದ ಪಡೆದುಕೊಂಡಿದ್ದ ಸಾಲವನ್ನು ಮರು ಪಾವತಿಸಲು ನಿರಾಕರಿಸಿದ ದಿಲ್ಲಿಯ 22ರ ಹರೆಯದ ಟಟ್ಟೂ ಕಲಾವಿದ ಬಬ್ಲೂ ಕುಮಾರ್ ನನ್ನು ಆತನ ಮೂವರು ಸ್ನೇಹಿತರು ತೆಂಗಿನಕಾಯಿ ಒಡೆಯವ ಕತ್ತಿಯಿಂದ ತಲೆ ಕಡಿದು ಕೊಂದಿರುವ ಘಟನೆ ವರದಿಯಾಗಿದೆ.
ತಲೆ ಕಡಿಯಲ್ಪಟ್ಟ ಬಬ್ಲೂ ವಿನ ಶವ ದಿಲ್ಲಿಯ ಮಯೂರ್ ವಿಸಾರನಲ್ಲಿನ ಖಾಲಿ ನಿವೇಶನವೊಂದರ ಪೊದೆಯಲ್ಲಿ ಪತ್ತೆಯಾಗಿದೆ
ಬಬ್ಲೂ ವನ್ನು ಹತ್ಯೆಗೈದ ಆತನ ಮೂವರು ಸ್ನೇಹಿತರಾದ ಪ್ರಶಾಂತ್ ಮಿಶ್ರ (25), ಅಂಕಿತ್ ಶರ್ಮಾ (19) ಮತ್ತು ಇಂದ್ರಜಿತ್ ಅಲಿಯಾಸ್ ಬಾಬ್ಬಿ ಯನ್ನು ಪೊಲೀಸರು ಬಂಧಿಸಿದ್ದಾರೆ.