ವಿಪತ್ತು ಪರಿಹಾರ ಸೇವೆಗೆ ಪ್ರಶಸ್ತಿ
Team Udayavani, Dec 27, 2018, 6:25 AM IST
ನವದೆಹಲಿ: ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಸಂಘ- ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಇತರರಲ್ಲಿ ಸ್ಫೂರ್ತಿ ತುಂಬಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
“ಸುಭಾಷ್ಚಂದ್ರ ಬೋಸ್ ಆಪಾª ಪ್ರಬಂಧನ್ ಪುರಸ್ಕಾರ್’ ಹೆಸರಿನಲ್ಲಿ ಮೂರು ಸಂಸ್ಥೆಗಳು ಹಾಗೂ ಮೂವರು ವ್ಯಕ್ತಿಗಳಿಗೆ ಈ ಪ್ರಶಸ್ತಿಗಳ ಜತೆಗೆ 5ರಿಂದ 51 ಲಕ್ಷ ರೂ.ಗಳವರೆಗೆ ನಗದು ಪುರಸ್ಕಾರ ನೀಡಲು ಉದ್ದೇಶಿಸ ಲಾಗಿದೆ. ಪ್ರಶಸ್ತಿಗೆ ಭಾಜನವಾಗುವ ಸಂಸ್ಥೆಗೆ ಪ್ರಮಾಣ ಪತ್ರ ಹಾಗೂ 51 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳಿಗೆ ಪ್ರಮಾಣ ಪತ್ರದ ಜತೆಗೆ 5 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸ ಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪ್ರಾಧಿಕಾರ (ಎನ್ ಡಿಎಂಎ) ತಿಳಿಸಿದೆ. ಸಂಸ್ಥೆ ಯೊಂದು ಈ ಪ್ರಶಸ್ತಿಗೆ ಭಾಜನ ವಾದರೂ ಅದೇ ಸಂಸ್ಥೆಯ ಸದಸ್ಯರಿಗೆ ವೈಯಕ್ತಿಕ ಮಟ್ಟದಲ್ಲಿ ಪ್ರಶಸ್ತಿ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.