ಮೊಸಳೆ ಸ್ಮರಣಾರ್ಥ ದೇಗುಲ!
Team Udayavani, Jan 11, 2019, 12:30 AM IST
ರಾಯ್ಪುರ: ಜನಪ್ರಿಯ ಸಿನಿಮಾ ತಾರೆಯರು, ಖ್ಯಾತ ವ್ಯಕ್ತಿಗಳ ಸ್ಮರಣಾರ್ಥ ಅಭಿಮಾನಿಗಳು ದೇಗುಲ ನಿರ್ಮಿಸುತ್ತಾರೆ. ಗ್ರಾಮದಲ್ಲಿದ್ದ ಮೊಸಳೆ ನೆನಪಿಗಾಗಿ ದೇಗುಲ ನಿರ್ಮಿಸುವ ಉದ್ದೇಶ ಕತೆ ಇಲ್ಲಿದೆ. ಛತ್ತೀಸ್ಗಡದ ಬೆಮೆತಾರಾ ಜಿಲ್ಲೆಯ ಬಾವಾ ಮೊಹತಾರಾ ಗ್ರಾಮದಲ್ಲಿ ಶೀಘ್ರದಲ್ಲಿಯೇ ಅಂಥದ್ದು ನಿರ್ಮಾಣವಾಗಲಿದೆ. ಅಲ್ಲಿ 130 ವರ್ಷ ವಯಸ್ಸಿನದ್ದು ಎಂದು ನಂಬಲಾಗಿರುವ “ಗಂಗಾರಾಮ್’ ಎಂಬ ಮೊಸಳೆ ಅಸುನೀಗಿತ್ತು. ಸ್ಥಳೀಯರಿಗೆ ಅದು ದೇವರ ಸಮಾನವೇ ಆಗಿತ್ತು. ಅದರ ಅಂತ್ಯಕ್ರಿಯೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಗ್ರಾಮದ ಕೆರೆಯಲ್ಲಿ ಮಂಗಳವಾರ ಅಸುನೀಗಿತ್ತು. ಈ ಘಟನೆಯಿಂದ ದುಃಖೀತರಾಗಿದ್ದ ಗ್ರಾಮಸ್ಥರು ಒಂದು ದಿನ ಅಡುಗೆ ಮಾಡದೆ ಕುಳಿತಿದ್ದರು. ಗ್ರಾಮದ ಮುಖ್ಯಸ್ಥ ಮೋಹನ್ ಸಾಹು ಮಾತನಾಡಿ “ನಮ್ಮನ್ನು ಬಿಟ್ಟು ಅಗಲಿದ ಮೊಸಳೆ ಸ್ಮರಣಾರ್ಥ ದೇಗುಲ ನಿರ್ಮಿಸುವ ಇರಾದೆ ಇದೆ’ ಎಂದಿದ್ದಾರೆ. 3.4 ಮೀಟರ್ ಉದ್ದದ ಮೊಸಳೆ ಗ್ರಾಮದ ಕೆರೆಯಲ್ಲಿ 100 ವರ್ಷಗಳಿಂದಲೂ ಹೆಚ್ಚಿನ ಕಾಲ ಇತ್ತು. ಅವರ ಬಾಲ್ಯ ಕಾಲ ಮಾತ್ರವಲ್ಲ, ಅಜ್ಜ ಕೂಡ ಕೆರೆಯಲ್ಲಿ ಅದೇ ಮೊಸಳೆ ಇದ್ದ ಬಗ್ಗೆ ಹೇಳುತ್ತಿದ್ದ ಬಗ್ಗೆ ನೆನಪು ಇದೆ ಎಂದು ಸಾಹು ಹೇಳಿದ್ದಾರೆ. 250 ಕೆಜಿ ತೂಕ ಇದ್ದ ಆ ಮೊಸಳೆ ಕೆಲವೊಂದು ಬಾರಿ ಕೆರೆಯಿಂದ ಹೊರ ಬರುತ್ತಿತ್ತು. ಸ್ಥಳೀಯರೇ ಅದನ್ನು ಮತ್ತೆ ಅದರ ವಾಸಸ್ಥಾನಕ್ಕೆ ಹೊತ್ತೂಯ್ಯುತ್ತಿದ್ದರು. ಸ್ಥಳೀಯರ ಅಭಿಮಾನವನ್ನು ಬೆಮೆತಾರಾ ವಿಭಾಗದ ಅರಣ್ಯಾಧಿಕಾರಿ ಆರ್.ಕೆ.ಸಿನ್ಹಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಾನವ-ಪ್ರಾಣಿ ಸಹ ಜೀವನಕ್ಕೆ ಗ್ರಾಮಸ್ಥರು ಮಾದರಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್