ಅಧ್ಯಾದೇಶ ಮರು ಜಾರಿ
Team Udayavani, Jan 14, 2019, 12:30 AM IST
ಹೊಸದಿಲ್ಲಿ: ತ್ರಿವಳಿ ತಲಾಖ್ ನಿಷೇಧಿಸಿ ಅಧ್ಯಾದೇಶವನ್ನು ಕೇಂದ್ರ ಸರಕಾರ ಮರುಜಾರಿಗೊಳಿಸಿದೆ. ಶನಿವಾರ ಈ ಸಂಬಂಧ ಅಧ್ಯಾದೇಶವನ್ನು ಪುನಃ ಹೊರಡಿಸಲಾಗಿದೆ.
2018 ಸೆಪ್ಟಂಬರ್ನಲ್ಲಿ ಇದೇ ಅಧ್ಯಾದೇಶವನ್ನು ಹೊರಡಿಸಲಾ ಗಿತ್ತು. ಆದರೆ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಗೊಂಡಿಲ್ಲದ ಹಿನ್ನೆಲೆಯಲ್ಲಿ ಪುನಃ ಅಧ್ಯಾದೇಶ ಜಾರಿಗೊಳಿಸುವ ಅನಿವಾರ್ಯ ಎದುರಾಗಿತ್ತು. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರಿಂದ ಮಸೂದೆ ಅನುಮೋದನೆ ಗೊಂಡಿತ್ತಾದರೂ ರಾಜ್ಯಸಭೆಯಲ್ಲಿ ವಿಪಕ್ಷಗಳ ಆಕ್ಷೇಪದಿಂದ ಅನು ಮೋದನೆ ಗೊಂಡಿಲ್ಲ.
ಅಧ್ಯಾದೇಶ ಪ್ರಕಾರ ತ್ರಿವಳಿ ತಲಾಖ್ ನೀಡುವುದು ಜಾಮೀನು ರಹಿತ ಅಪರಾಧವಾಗಿದ್ದು, ವಿಚಾರಣೆ ಆರಂಭಕ್ಕೂ ಮೊದಲೇ ಜಾಮೀನಿಗಾಗಿ ಮ್ಯಾಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ಆದರೆ ಪೊಲೀಸ್ ಸ್ಟೇಷನ್ನಲ್ಲಿ ಆರೋಪಿಗೆ ಜಾಮೀನು ನೀಡಲಾಗುವುದಿಲ್ಲ. ಪತ್ನಿಯ ವಾದ ಆಲಿಸಿದ ಅನಂತರ ಪತಿಗೆ ಜಾಮೀನು ನೀಡುವ ಬಗ್ಗೆ ಮ್ಯಾಜಿಸ್ಟ್ರೇಟ್ ನಿರ್ಧರಿಸಬಹುದಾಗಿದೆ. ಅಷ್ಟೇ ಅಲ್ಲ, ಪತ್ನಿಗೆ ಮಸೂದೆಯಲ್ಲಿ ಸೂಚಿಸಿದಂತೆ ಪರಿಹಾರ ನೀಡಲು ಪತಿ ಸಮ್ಮತಿಸಿದರೆ ಜಾಮೀನು ನೀಡಬಹುದಾಗಿದೆ.
ಮೆಡಿಕಲ್ ಕೌನ್ಸೆಲ್ ಅಧ್ಯಾದೇಶ
ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಬದಲಿಗೆ ನಿಯೋಜಿತ ಗವರ್ನರ್ಗಳ ಮಂಡಳಿಯಿಂದ ವೈದ್ಯಕೀಯ ಶಿಕ್ಷಣ ನಿರ್ವಹಣೆ ಮಾಡುವ ಅಧ್ಯಾದೇಶವನ್ನೂ ಕೇಂದ್ರ ಸರಕಾರ ಪುನಃ ಜಾರಿಗೊಳಿಸಿದೆ. ಒಟ್ಟಾರೆ ವೈದ್ಯಕೀಯ ಶಿಕ್ಷಣವನ್ನು ಬದಲಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಸಂಸತ್ ಅನು ಮೋದನೆ ಲಭ್ಯವಾಗದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ