ಕೇರಳ: ಇನ್ನೊಂದು “ನಿಷೇಧಿತ’ ಸ್ಥಳಕ್ಕೆ ಮಹಿಳೆ ಲಗ್ಗೆ​​​​​​​


Team Udayavani, Jan 15, 2019, 12:30 AM IST

agasthyarkoodam.jpg

ತಿರುವನಂತಪುರ: ಶತಮಾನಗಳಷ್ಟು ಹಳೆಯ ಆದಿವಾಸಿ ಸಂಪ್ರದಾಯ ದಂತೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದ್ದ ಕೇರಳದ ಎರಡನೇ ಅತ್ಯುನ್ನತ ಶಿಖರ ಅಗಸ್ತ್ಯರ್‌ಕೂಡಂಗೆ ಮಹಿಳೆಯೊಬ್ಬರು ಚಾರಣ ಆರಂಭಿಸಿದ್ದಾರೆ. 

ಶಬರಿಮಲೆಗೆ ಈಚೆಗೆ ಋತುಮತಿ ವಯಸ್ಸಿನ ಮೂವರು ಮಹಿಳೆಯರು ಪ್ರವೇಶಿಸಿದ ಬಳಿಕ ಪುರುಷರಿಗೆ ಮಾತ್ರ ಪ್ರವೇಶವಿರುವ ಸ್ಥಳವೊಂದಕ್ಕೆ ಮಹಿಳೆ ಯರು ಲಗ್ಗೆಯಿಡುತ್ತಿರುವ ಇನ್ನೊಂದು ದೃಷ್ಟಾಂತ ಇದಾಗಿದೆ.

ತಿರುವನಂತಪುರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಆಗಿರುವ ಧನ್ಯಾ ಸನಲ್‌ ಅವರು ಚಾರಣ ಹೊರಟಿರುವ ಮಹಿಳೆ. ನಿಷೇಧವನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್‌ ಈಚೆಗೆ ನೀಡಿದ ತೀರ್ಪಿನ ಪ್ರತಿಯನ್ನು ಹಿಡಿದು ಅವರು ಸೋಮವಾರ ಬೋನಕಾಡ್‌ನಿಂದ ಪುರುಷ ಚಾರಣಿಗರೊಂದಿಗೆ ಕಠಿನ ಚಾರಣವನ್ನು ಆರಂಭಿಸಿದ್ದಾರೆ. ನೆಯ್ನಾರ್‌ ವನ್ಯಜೀವಿಧಾಮದಲ್ಲಿರುವ ಅಗಸ್ತ್ಯರ್‌ಕೂಡಂಗೆ ಹೊರಟಿರುವ 100 ಮಂದಿ ಚಾರಣಿಗರ ತಂಡದಲ್ಲಿರುವ ಏಕೈಕ ಮಹಿಳೆ ಧನ್ಯಾ.

ಈ ವರ್ಷ ಅಗಸ್ತ್ಯರ್‌ಕೂಡಂಗೆ ಚಾರಣ ತೆರಳುವುದಕ್ಕೆ 100 ಮಹಿಳೆಯರ ಸಹಿತ ಒಟ್ಟು 4,700 ಮಂದಿ ನೋಂದಾ ಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಶಿಖರಕ್ಕೆ ಚಾರಣ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಚಾರಣ ಸಂಘಟಿಸುತ್ತಿರುವ ಕೇರಳ ಅರಣ್ಯ ಇಲಾಖೆ ಹೇಳಿದೆ. ಮಹಿಳೆಯರ ಪ್ರವೇಶಕ್ಕೆ ಕೆಲ ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು.

ಆದಿವಾಸಿಗಳ‌ ಪ್ರತಿಭಟನೆ
ಶಿಖರದ ತಪ್ಪಲಲ್ಲಿ ವಾಸವಿರುವ ಕಾಣಿ ಆದಿವಾಸಿಗಳು ಧನ್ಯಾ ಅವರು ಅಗಸ್ತ್ಯರ್‌ಕೂಡಂಗೆ ಚಾರಣ ಕೈಗೊಂಡಿರುವುದನ್ನು ವಿರೋಧಿಸಿ ಚಾರಣ ಆರಂಭವಾಗುವ ಬೋನಕಾಡ್‌ನ‌ಲ್ಲಿ ಪ್ರತಿಭಟನೆ ನಡೆಸಿದರು. ಮಹಿಳೆಯರನ್ನೊಳಗೊಂಡಂತೆ 100ಕ್ಕೂ ಅಧಿಕ ಆದಿವಾಸಿಗಳು ಜಾನಪದ ಹಾಡುಗಳನ್ನು ಹಾಡಿ ವಿಶಿಷ್ಟವಾಗಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಆದರೆ ಕೋರ್ಟು ಆದೇಶವಿರುವುದರಿಂದ ಚಾರಣಕ್ಕೆ ತಡೆಯೊಡ್ಡುವುದಕ್ಕೆ ಹೋಗಲಿಲ್ಲ.

ಆದಿವಾಸಿಗಳು ಹೇಳುವುದೇನು?
ಪರ್ವತ ವಲಯ ಹಿಂದೂ ಸಪ್ತರ್ಷಿಗಳಲ್ಲಿ  ಓರ್ವರಾದ ಅಗಸ್ತ್ಯ ಮುನಿಯ ಪವಿತ್ರ ವಾಸಸ್ಥಾನವಾಗಿತ್ತೆಂದು ಕಾಣಿ ಆದಿವಾಸಿಗಳು ಹೇಳು ತ್ತಾರೆ. ಅಲ್ಲಿ ಅಗಸ್ತ್ಯರ ವಿಗ್ರಹವಿದ್ದು ಶಿಖರಕ್ಕೆ ತೆರಳುವುದಕ್ಕೆ ಮಹಿಳೆಯರಿಗೆ ಪರಂಪರಾಗತವಾಗಿ ಅವಕಾಶ ಇಲ್ಲವೆಂಬುದು ಅವರ ವಾದವಾಗಿದೆ.

ಟಾಪ್ ನ್ಯೂಸ್

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.