ಡ್ಯಾನ್ಸ್ ಬಾರ್ ಬಿಗಿ ನಿಯಮ ರದ್ದುಗೊಳಿಸಿದ ಸುಪ್ರೀಂ
Team Udayavani, Jan 18, 2019, 12:30 AM IST
ಹೊಸದಿಲ್ಲಿ: ಮಹತ್ವದ ಬೆಳವಣಿಗೆ ಒಂದರಲ್ಲಿ ಮಹಾರಾಷ್ಟ್ರ ಸರಕಾರ ಡ್ಯಾನ್ಸ್ ಬಾರ್ಗಳ ಮೇಲೆ ವಿಧಿಸಲಾಗಿದ್ದ ಕಠಿನ ನಿಯಮಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ನೃತ್ಯದ ಸ್ಥಳದಲ್ಲಿ ಮದ್ಯದ ಸರಬರಾಜಿಗೆ ಅನುಮತಿ ನೀಡಿದೆ. ಜತೆಗೆ, 2005ರಿಂದೀಚೆಗೆ ಡ್ಯಾನ್ಸ್ ಬಾರ್ಗಳಿಗೆ ಪರವಾನಿಗೆ ನೀಡದಿರುವ ಸರಕಾರದ ಕಠಿನ ನಿರ್ಧಾರಕ್ಕೆ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರುಳ್ಳ ಪೀಠ ತಡೆಯೊಡ್ಡಿದೆ.
ಏನಿದು ಪ್ರಕರಣ?: 2015ರ ಆಗಸ್ಟ್ 15ರಂದು ರಾಜ್ಯದಲ್ಲಿ ಎಲ್ಲ ಡ್ಯಾನ್ಸ್ ಬಾರ್ಗಳನ್ನು ನಿಷೇಧಿಸಿ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿತ್ತು. ಪರಿಣಾಮ, ಮಹಾರಾಷ್ಟ್ರದಲ್ಲಿ 700 ಬಾರ್ಗಳು ಬಾಗಿಲು ಮುಚ್ಚಿದ್ದವು. ಅಲ್ಲದೆ, ಸುಮಾರು, 70,000ದಷ್ಟು ಬಾರ್ ನೃತ್ಯಗಾರ್ತಿಯರು ನಿರುದ್ಯೋಗಿಗಳಾಗಿದ್ದರು.
ಕಾನೂನು ಸಮರ: ಸರಕಾರದ ನಿರ್ಧಾರದ ವಿರುದ್ಧ ಮಹಾರಾಷ್ಟ್ರ ಹೊಟೇಲ್ ಮತ್ತು ರೆಸ್ಟಾರೆಂಟ್ ಮಾಲೀಕರ ಸಂಘ 2006ರಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ, ಮುಂಬಯಿ ಹೈಕೋರ್ಟ್ ಮಹಾರಾಷ್ಟ್ರ ಸರಕಾರದ ಆದೇಶವನ್ನು ರದ್ದುಗೊಳಿಸಿತ್ತು. ಹಾಗಾಗಿ, ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.
ನ್ಯಾಯಪೀಠ ಹೇಳಿದ್ದೇನು?
ವಿದ್ಯಾ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಳಿಂದ ಡ್ಯಾನ್ಸ್ ಬಾರ್ಗಳು 1 ಕಿ.ಮೀ. ವ್ಯಾಪ್ತಿಯಾಚೆಗೆ ಇರಬೇಕು ಎಂಬ ನಿಯಮ ರದ್ದು
ಡ್ಯಾನ್ಸ್ ಬಾರ್ಗಳಲ್ಲಿ ನೃತ್ಯಗಾತಿಯರಿಗೆ ಹಣವನ್ನು ಟಿಪ್ಸ್ ರೂಪದಲ್ಲಿ ನೀಡಬಹುದು. ಆದರೆ, ಅವರ ಮೇಲೆ ಹಣವನ್ನು ಎಸೆಯುವಂತಿಲ್ಲ
ಡ್ಯಾನ್ಸ್ ಬಾರ್ಗಳಲ್ಲಿ ಕುಣಿತದ ಸ್ಥಳ ಮತ್ತು ಮದ್ಯಪಾನದ ಸ್ಥಳ ಬೇರೆಯಾಗಿರಬೇಕೆಂಬ ನಿಯಮ ರದ್ದು
ಭದ್ರತೆಗಾಗಿ ಡ್ಯಾನ್ಸ್ ಬಾರ್ಗಳಲ್ಲಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸುವುದು ಕಡ್ಡಾಯವೇನಿಲ್ಲ
ಡ್ಯಾನ್ಸ್ ಬಾರ್ ಮಾಲೀಕ ಉತ್ತಮ ಚಾರಿತ್ರ್ಯವುಳ್ಳವನಾಗಿರಬೇಕು ಹಾಗೂ ಯಾವುದೇ ಅಪರಾಧ ಹಿನ್ನೆಲೆ ಇರಬಾರದೆಂಬ ನಿಯಮ ರದ್ದು
ಆದರೆ, ಪ್ರತಿ ಡ್ಯಾನ್ಸ್ ಬಾರ್ಗಳ ಅವಧಿಯನ್ನು ಸಂಜೆ 6ರಿಂದ ರಾತ್ರಿ 11:30ಕ್ಕೆ ನಿಗದಿಗೊಳಿಸಬಹುದು.
ಡ್ಯಾನ್ಸ್ ಬಾರ್ಗಳ ಮಾಲಕರೊಂದಿಗೆ ಅನೈತಿಕ ನಂಟು ಹೊಂದಿರುವ ಮಹಾರಾಷ್ಟ್ರ ಸರಕಾರ, ಸುಪ್ರೀಂ ಕೋರ್ಟ್ಗೆ ತನ್ನ ವಾದಕ್ಕೆ ಪುಷ್ಟಿ ನೀಡುವಂಥ ದಾಖಲೆಗಳನ್ನು ನೀಡಿಲ್ಲ. ಹಾಗಾಗಿ, ವ್ಯತಿರಿಕ್ತ ತೀರ್ಪು ಬಂದಿದೆ. ಈಗ ಸಿಎಂ ಫಡ್ನವಿಸ್ ಅವರೇ ಡ್ಯಾನ್ಸ್ ಬಾರ್ಗಳು ಮತ್ತೆ ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ನವಾಬ್ ಮಲಿಕ್, ಎನ್ಸಿಪಿ ನಾಯಕ
ಸರಕಾರದ ಎಲ್ಲ ನಿಬಂಧನೆಗಳನ್ನೂ ಸುಪ್ರೀಂ ಕೋರ್ಟ್ ರದ್ದು ಮಾಡಿಲ್ಲ. ಕೆಲವನ್ನು ಉಳಿಸಿಕೊಂಡು, ಕೆಲವನ್ನು ಮಾತ್ರ ವಜಾ ಮಾಡಿದೆ. ಇದೊಂದು ಮಿಶ್ರ ತೀರ್ಪು.
ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಸಿಎಂ
ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಹಿನ್ನಡೆ
ಡ್ಯಾನ್ಸ್ ಬಾರ್ಗಳಿಗೆ ಲೈಸನ್ಸ್ ವಿತ ರಿಸದ ಕ್ರಮಕ್ಕೆ ತಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
MUST WATCH
ಹೊಸ ಸೇರ್ಪಡೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ