ಗುಂಡಿನ ದಾಳಿಗೆ ಜಗ್ಗದ ವಧು
Team Udayavani, Jan 19, 2019, 12:30 AM IST
ಹೊಸದಿಲ್ಲಿ: ಆಕೆ ಕೆಲವೇ ನಿಮಿಷಗಳಲ್ಲಿ ಹಸೆಮಣೆ ಏರಬೇಕಿತ್ತು. ವೇದಿಕೆಯ ಮೇಲೆ ಮಾಂಗಲ್ಯಧಾರಣೆಗೆ ವರ ಸಜ್ಜಾಗಿದ್ದ. ಆದರೆ, ವೇದಿಕೆ ಕಡೆಗೆ ಕರೆತರಲಾಗುತ್ತಿದ್ದ ವಧುವಿಗೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಓಡಿಹೋದ! ನೆರೆದಿದ್ದವರೆಲ್ಲರೂ ಶಾಕ್ ಆದರು. ಆದರೆ, ಅದೃಷ್ಟವಶಾತ್ ಗುಂಡು ಆಕೆಯ ಕಾಲಿಗೆ ತಗುಲಿತ್ತು. ಆದರೆ, ಪೂಜಾ ಹೆಸರಿನ ಆ ವನಿತೆ ಅಧೀರಳಾಗಲಿಲ್ಲ. ಆಸ್ಪತ್ರೆಗೆ ಹೋಗಿ ಗುಂಡು ತೆಗೆಸಿಕೊಂಡು ಪುನಃ ಕಲ್ಯಾಣ ಮಂಟಪಕ್ಕೆ ಹಾಜರಾಗಿ ಮಾಂಗಲ್ಯ ಬಂಧನಕ್ಕೊಳಗಾದಳು. ಇದು ದೆಹಲಿಯ ಶಾಕಾರ್ಪುರದಲ್ಲಿ ನಡೆದ ಸತ್ಯ ಘಟನೆ. ಗುಂಡು ತಾಗಿದ ಕೂಡಲೇ ವಧುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಂಡು ಹೊರತೆಗೆಯಲಾಯಿತು. ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದರೂ, ವಿನಂತಿಸಿಕೊಂಡು ಮದುವೆ ಮಂಟಪಕ್ಕೆ ಬಂದ ಯುವತಿ ಮದುವೆ ಶಾಸ್ತ್ರ ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ