ಗುಂಡಿನ ದಾಳಿಗೆ ಜಗ್ಗದ ವಧು
Team Udayavani, Jan 19, 2019, 12:30 AM IST
ಹೊಸದಿಲ್ಲಿ: ಆಕೆ ಕೆಲವೇ ನಿಮಿಷಗಳಲ್ಲಿ ಹಸೆಮಣೆ ಏರಬೇಕಿತ್ತು. ವೇದಿಕೆಯ ಮೇಲೆ ಮಾಂಗಲ್ಯಧಾರಣೆಗೆ ವರ ಸಜ್ಜಾಗಿದ್ದ. ಆದರೆ, ವೇದಿಕೆ ಕಡೆಗೆ ಕರೆತರಲಾಗುತ್ತಿದ್ದ ವಧುವಿಗೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಓಡಿಹೋದ! ನೆರೆದಿದ್ದವರೆಲ್ಲರೂ ಶಾಕ್ ಆದರು. ಆದರೆ, ಅದೃಷ್ಟವಶಾತ್ ಗುಂಡು ಆಕೆಯ ಕಾಲಿಗೆ ತಗುಲಿತ್ತು. ಆದರೆ, ಪೂಜಾ ಹೆಸರಿನ ಆ ವನಿತೆ ಅಧೀರಳಾಗಲಿಲ್ಲ. ಆಸ್ಪತ್ರೆಗೆ ಹೋಗಿ ಗುಂಡು ತೆಗೆಸಿಕೊಂಡು ಪುನಃ ಕಲ್ಯಾಣ ಮಂಟಪಕ್ಕೆ ಹಾಜರಾಗಿ ಮಾಂಗಲ್ಯ ಬಂಧನಕ್ಕೊಳಗಾದಳು. ಇದು ದೆಹಲಿಯ ಶಾಕಾರ್ಪುರದಲ್ಲಿ ನಡೆದ ಸತ್ಯ ಘಟನೆ. ಗುಂಡು ತಾಗಿದ ಕೂಡಲೇ ವಧುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಂಡು ಹೊರತೆಗೆಯಲಾಯಿತು. ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದರೂ, ವಿನಂತಿಸಿಕೊಂಡು ಮದುವೆ ಮಂಟಪಕ್ಕೆ ಬಂದ ಯುವತಿ ಮದುವೆ ಶಾಸ್ತ್ರ ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್