ಟಾಪ್ 50ರ ಪಟ್ಟಿಗೆ ಸೇರ್ಪಡೆ ನಮ್ಮ ಗುರಿ
Team Udayavani, Jan 19, 2019, 12:30 AM IST
ಗಾಂಧಿನಗರ: ಮುಂದಿನ ವರ್ಷದ ಹೊತ್ತಿಗೆ, ಭಾರತವನ್ನು, “ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ’ಯನ್ನು ಹೊಂದಿರುವ ವಿಶ್ವದ ಟಾಪ್ 50 ರಾಷ್ಟ್ರಗಳ ಪಟ್ಟಿಯೊಳಗೆ ಸೇರ್ಪಡೆಗೊಳಿಸುವುದು ಸರಕಾರದ ಮುಂದಿನ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತ್ ಸರಕಾರದ ಬಂಡವಾಳ ಹೂಡಿಕೆ ಸಮಾವೇಶವಾದ “ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್’ನ 9ನೇ ಆವೃತ್ತಿಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “”ಈ ಹಿಂದೆ, ವಿಶ್ವಬ್ಯಾಂಕ್ನ “ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿ’ಯಲ್ಲಿ ಭಾರತ, 152ನೇ ಸ್ಥಾನದಲ್ಲಿತ್ತು. ಆದರೆ, ಇತ್ತೀಚೆಗೆ ಭಾರತ 75 ಸ್ಥಾನಗಳ ಏರಿಕೆ ಕಂಡು ಪ್ರಸ್ತುತ 77ನೇ ಸ್ಥಾನದಲ್ಲಿದೆ. ಮುಂದಿನ ವರ್ಷ, ಭಾರತವನ್ನು ಟಾಪ್ 50ರೊಳಗೆ ಸೇರ್ಪಡೆಗೊಳಿಸುವ ಇರಾದೆಯಿದೆ. ಹಾಗಾಗಿ, ನನ್ನ ತಂಡಕ್ಕೆ ಕಠಿಣ ಪರಿಶ್ರಮ ಪಡುವಂತೆ ಸೂಚಿಸಿದ್ದೇನೆ. ನಮ್ಮ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಇಡೀ ವಿಶ್ವದಲ್ಲಿಯೇ ಶ್ರೇಷ್ಠವಾಗಿರಬೇಕೆಂಬುದೇ ನಮ್ಮ ಗುರಿ” ಎಂದರು.
ಫಲಕೊಟ್ಟ ಮೂಲಮಂತ್ರ: “”ರಿಫಾರ್ಮ್, ಪರ್ಫಾರ್ಮ್, ಟ್ರಾನ್ಸ್ಫಾರ್ಮ್ ಮತ್ತು ಫರ್ದರ್ ಟ್ರಾನ್ಸ್ಫಾರ್ಮ್’ ಎಂಬ ಮೂಲಮಂತ್ರದೊಂದಿಗೆ ಭಾರತವನ್ನು ಉದ್ಯಮ ಸ್ನೇಹಿ ರಾಷ್ಟ್ರವನ್ನಾಗಿಸಲು ನಮ್ಮ ಸರ್ಕರ ಮುಂದಾಗಿದ್ದು ಫಲ ಕೊಟ್ಟಿದೆ. ಈ ಪ್ರಯತ್ನಕ್ಕೆ ಪೂರಕವಾಗಿ, “ಒಂದು ದೇಶ-ಒಂದು ತೆರಿಗೆ’ ಆಸ್ಥೆಯಡಿ ಜಾರಿಗೆ ತರಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ವಿಶ್ವಬ್ಯಾಂಕ್ ಪಟ್ಟಿಯಲ್ಲಿ ಭಾರತದ ಸ್ಥಾನಮಾನ ಏರಲು ಪ್ರಮುಖ ಕಾರಣ. ಜಿಎಸ್ಟಿ ಏಕರೂಪ ತೆರಿಗೆ ವ್ಯವಸ್ಥೆಯಿಂದ ವ್ಯಾವಹಾರಿಕ ವೆಚ್ಚ ಇಳಿಕೆಯಾಗಿದ್ದು, ಸರಾಗ ವಹಿವಾಟಿಗೆ ಅನುಕೂಲವಾಗಿದೆ” ಎಂದರು.
“”ಇದಲ್ಲದೆ, ಡಿಜಿಟಲ್ ತಂತ್ರಜ್ಞಾನ ಆಧಾರಿತ ಆಡಳಿತ, ಆನ್ಲೈನ್ ವಹಿವಾಟು ಹಾಗೂ ಸಿಂಗಲ್ ಪಾಯಿಂಟ್ ಇಂಟರ್ಫೇಸ್, ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಉತ್ತೇಜನ ಮುಂತಾದ ಕಾರಣಗಳಿಂದಾಗಿ, ವಿಶ್ವಬ್ಯಾಂಕ್ ಮತ್ತು ಐಎಂಎಫ್, ಮೂಡೀಸ್ನಂಥ ಏಜೆನ್ಸಿಗಳು ಭಾರತದ ಆರ್ಥಿಕತೆಯ ಮೇಲೆ ಅಚಲವಾದ ವಿಶ್ವಾಸವಿಡಲು ಸಾಧ್ಯವಾಗಿದೆ” ಎಂದರು.
ನಮ್ಮ ದತ್ತಾಂಶಕ್ಕೆ ನಮ್ಮದೇ ಉಸ್ತುವಾರಿ ಇರಲಿ: ಭಾರತೀಯರಿಗೆ ಸಂಬಂಧಿಸಿದ ಅಂತರ್ಜಾಲ ದತ್ತಾಂಶಗಳ ಮೇಲೆ ಜಾಗತಿಕ ಮಟ್ಟದ ಕಂಪನಿಗಳು ನಡೆಸುತ್ತಿರುವ ವಸಾಹತು ಶಾಹಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಬೇಕು ಎಂದು ಪ್ರಧಾನಿ ಮೋದಿಯವರನ್ನು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ