ಟಾಪ್ 50ರ ಪಟ್ಟಿಗೆ ಸೇರ್ಪಡೆ ನಮ್ಮ ಗುರಿ
Team Udayavani, Jan 19, 2019, 12:30 AM IST
ಗಾಂಧಿನಗರ: ಮುಂದಿನ ವರ್ಷದ ಹೊತ್ತಿಗೆ, ಭಾರತವನ್ನು, “ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ’ಯನ್ನು ಹೊಂದಿರುವ ವಿಶ್ವದ ಟಾಪ್ 50 ರಾಷ್ಟ್ರಗಳ ಪಟ್ಟಿಯೊಳಗೆ ಸೇರ್ಪಡೆಗೊಳಿಸುವುದು ಸರಕಾರದ ಮುಂದಿನ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತ್ ಸರಕಾರದ ಬಂಡವಾಳ ಹೂಡಿಕೆ ಸಮಾವೇಶವಾದ “ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್’ನ 9ನೇ ಆವೃತ್ತಿಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “”ಈ ಹಿಂದೆ, ವಿಶ್ವಬ್ಯಾಂಕ್ನ “ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿ’ಯಲ್ಲಿ ಭಾರತ, 152ನೇ ಸ್ಥಾನದಲ್ಲಿತ್ತು. ಆದರೆ, ಇತ್ತೀಚೆಗೆ ಭಾರತ 75 ಸ್ಥಾನಗಳ ಏರಿಕೆ ಕಂಡು ಪ್ರಸ್ತುತ 77ನೇ ಸ್ಥಾನದಲ್ಲಿದೆ. ಮುಂದಿನ ವರ್ಷ, ಭಾರತವನ್ನು ಟಾಪ್ 50ರೊಳಗೆ ಸೇರ್ಪಡೆಗೊಳಿಸುವ ಇರಾದೆಯಿದೆ. ಹಾಗಾಗಿ, ನನ್ನ ತಂಡಕ್ಕೆ ಕಠಿಣ ಪರಿಶ್ರಮ ಪಡುವಂತೆ ಸೂಚಿಸಿದ್ದೇನೆ. ನಮ್ಮ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಇಡೀ ವಿಶ್ವದಲ್ಲಿಯೇ ಶ್ರೇಷ್ಠವಾಗಿರಬೇಕೆಂಬುದೇ ನಮ್ಮ ಗುರಿ” ಎಂದರು.
ಫಲಕೊಟ್ಟ ಮೂಲಮಂತ್ರ: “”ರಿಫಾರ್ಮ್, ಪರ್ಫಾರ್ಮ್, ಟ್ರಾನ್ಸ್ಫಾರ್ಮ್ ಮತ್ತು ಫರ್ದರ್ ಟ್ರಾನ್ಸ್ಫಾರ್ಮ್’ ಎಂಬ ಮೂಲಮಂತ್ರದೊಂದಿಗೆ ಭಾರತವನ್ನು ಉದ್ಯಮ ಸ್ನೇಹಿ ರಾಷ್ಟ್ರವನ್ನಾಗಿಸಲು ನಮ್ಮ ಸರ್ಕರ ಮುಂದಾಗಿದ್ದು ಫಲ ಕೊಟ್ಟಿದೆ. ಈ ಪ್ರಯತ್ನಕ್ಕೆ ಪೂರಕವಾಗಿ, “ಒಂದು ದೇಶ-ಒಂದು ತೆರಿಗೆ’ ಆಸ್ಥೆಯಡಿ ಜಾರಿಗೆ ತರಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ವಿಶ್ವಬ್ಯಾಂಕ್ ಪಟ್ಟಿಯಲ್ಲಿ ಭಾರತದ ಸ್ಥಾನಮಾನ ಏರಲು ಪ್ರಮುಖ ಕಾರಣ. ಜಿಎಸ್ಟಿ ಏಕರೂಪ ತೆರಿಗೆ ವ್ಯವಸ್ಥೆಯಿಂದ ವ್ಯಾವಹಾರಿಕ ವೆಚ್ಚ ಇಳಿಕೆಯಾಗಿದ್ದು, ಸರಾಗ ವಹಿವಾಟಿಗೆ ಅನುಕೂಲವಾಗಿದೆ” ಎಂದರು.
“”ಇದಲ್ಲದೆ, ಡಿಜಿಟಲ್ ತಂತ್ರಜ್ಞಾನ ಆಧಾರಿತ ಆಡಳಿತ, ಆನ್ಲೈನ್ ವಹಿವಾಟು ಹಾಗೂ ಸಿಂಗಲ್ ಪಾಯಿಂಟ್ ಇಂಟರ್ಫೇಸ್, ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಉತ್ತೇಜನ ಮುಂತಾದ ಕಾರಣಗಳಿಂದಾಗಿ, ವಿಶ್ವಬ್ಯಾಂಕ್ ಮತ್ತು ಐಎಂಎಫ್, ಮೂಡೀಸ್ನಂಥ ಏಜೆನ್ಸಿಗಳು ಭಾರತದ ಆರ್ಥಿಕತೆಯ ಮೇಲೆ ಅಚಲವಾದ ವಿಶ್ವಾಸವಿಡಲು ಸಾಧ್ಯವಾಗಿದೆ” ಎಂದರು.
ನಮ್ಮ ದತ್ತಾಂಶಕ್ಕೆ ನಮ್ಮದೇ ಉಸ್ತುವಾರಿ ಇರಲಿ: ಭಾರತೀಯರಿಗೆ ಸಂಬಂಧಿಸಿದ ಅಂತರ್ಜಾಲ ದತ್ತಾಂಶಗಳ ಮೇಲೆ ಜಾಗತಿಕ ಮಟ್ಟದ ಕಂಪನಿಗಳು ನಡೆಸುತ್ತಿರುವ ವಸಾಹತು ಶಾಹಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಬೇಕು ಎಂದು ಪ್ರಧಾನಿ ಮೋದಿಯವರನ್ನು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ