ಕಾಂಗ್ರೆಸ್ಗೆ ಬೆಂಬಲವಿಲ್ಲ :ವಿಎಚ್ಪಿ ಕಾರ್ಯಾಧ್ಯಕ್ಷ
Team Udayavani, Jan 21, 2019, 12:24 AM IST
ಹೊಸದಿಲ್ಲಿ: ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟುವ ಭರವಸೆ ನೀಡಿದರೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸನ್ನು ಬೆಂಬಲಿಸುತ್ತೇವೆ ಎಂದು ತಾವೆಲ್ಲೂ ಹೇಳಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಹೇಳಿಕೆ ನೀಡಿದ್ದ ಅಲೋಕ್, ಕಾಂಗ್ರೆಸ್ ಮಂದಿರ ಕಟ್ಟುವುದಾದರೆ ವಿಎಚ್ಪಿ ಬೆಂಬಲ ನೀಡುತ್ತದೆ ಎಂದಿದ್ದರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, “ಸದ್ಯದ ಪರಿಸ್ಥಿತಿಯಲ್ಲಿ ಮಂದಿರಕ್ಕೆ ಅಧ್ಯಾದೇಶ ತರಲು ಕೇಂದ್ರ ಸರಕಾರದಿಂದ ಸಾಧ್ಯವಿಲ್ಲ ಎಂದಷ್ಟೇ ಹೇಳಿದ್ದು, ನನ್ನ ಮಾತನ್ನು ಬೇರೊಂದು ಅರ್ಥದಲ್ಲಿ ಕಲ್ಪಿಸಿಕೊಂಡು ಮಾಧ್ಯಮಗಳು ವರದಿ ಮಾಡಿವೆ. ಕಾಂಗ್ರೆಸ್ಸನ್ನು ಯಾವತ್ತಿಗೂ ವಿಎಚ್ಪಿ ಬೆಂಬಲಿಸುವುದಿಲ್ಲ’ ಎಂದಿದ್ದಾರೆ.