ಪ್ರಯಾಗ್ರಾಜ್: ರಾಮ ನಾಮ ಬ್ಯಾಂಕ್!
Team Udayavani, Jan 22, 2019, 12:30 AM IST
ಅಲಹಾಬಾದ್: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ವಿನೂತನ ಬ್ಯಾಂಕ್ವೊಂದು ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ‘ರಾಮ ನಾಮ ಬ್ಯಾಂಕ್’!
ಈ ಬ್ಯಾಂಕ್ನಲ್ಲಿ ಹಣ, ಎಟಿಎಂ, ಚೆಕ್ ಬುಕ್ನ ಸುದ್ದಿಯೇ ಇರಲ್ಲ. ಏಕೆಂದರೆ, ಇಲ್ಲಿ ಹಣಕಾಸಿನ ವ್ಯವಹಾರವೇ ನಡೆಯುವುದಿಲ್ಲ. ಇಲ್ಲಿ ನಡೆಯುವುದು ಆಧ್ಯಾತ್ಮಿಕ ವ್ಯವಹಾರ. ಅಂದರೆ, ಮನಶಾÏಂತಿ ಹಾಗೂ ನೆಮ್ಮದಿಗಾಗಿ ಜನ ಈ ಬ್ಯಾಂಕ್ನಲ್ಲಿ ಖಾತೆ ತೆರೆಯುತ್ತಿದ್ದಾರೆ. ಇಲ್ಲಿ ಚಲಾವಣೆಯಾಗುವ ಏಕೈಕ ಕರೆನ್ಸಿಯೆಂದರೆ, ‘ಭಗವಾನ್ ಶ್ರೀರಾಮ.’
ಹೌದು, 20ನೇ ಶತಮಾನದ ಆರಂಭದಲ್ಲಿ ಈಶ್ವರ್ ಚಂದ್ರ ಎಂಬವರು ಆರಂಭಿಸಿದ್ದ ಬ್ಯಾಂಕ್ ಅನ್ನು ಈಗ ಅವರ ಮೊಮ್ಮಗ ಅಶುತೋಷ್ ನಿರ್ವಹಿಸುತ್ತಿದ್ದಾರೆ. ಒಂಬತ್ತು ದಶಕಗಳಿಂದ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ವಿವಿಧ ಧರ್ಮ ಹಾಗೂ ವಯೋಮಿತಿಯ ಸುಮಾರು ಒಂದು ಲಕ್ಷ ಖಾತೆದಾರರಿದ್ದಾರೆ.
ಕಾರ್ಯನಿರ್ವಹಣೆ ಹೇಗೆ?:
ಖಾತೆದಾರರಿಗೆ 108 ಕಾಲಂಗಳಿರುವ 30 ಪುಟಗಳ ಪುಸ್ತಿಕೆಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಅವರು ಪ್ರತಿ ದಿನ 108 ಬಾರಿ ‘ರಾಮ ನಾಮ’ವನ್ನು ಬರೆಯಬೇಕು. ಈ ಪುಸ್ತಿಕೆಯನ್ನು ಆಯಾ ಸದಸ್ಯನ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಇತರೆ ಬ್ಯಾಂಕ್ಗಳಂತೆ ಪಾಸ್ಬುಕ್ಗಳನ್ನೂ ವಿತರಿಸಲಾಗುತ್ತದೆ. ಖಾತೆಯ ಪ್ರಮಾಣವು ರಾಮ ನಾಮದ ಸಂಖ್ಯೆಗಳನ್ನು ಆಧರಿಸಿರುತ್ತದೆ. ಇದನ್ನು ಲಿಖೀತ ಜಪ ಎಂದು ಹೇಳಲಾಗುತ್ತದೆ. ರಾಮ ನಾಮವನ್ನು ಬರೆಯುತ್ತಾ, ಬರೆಯುತ್ತಾ ಆ ವ್ಯಕ್ತಿಯು ಮನಶಾÏಂತಿಯನ್ನು ಗಳಿಸುವನು ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್ ಅಶುತೋಷ್.
ಈ ಬ್ಯಾಂಕ್19 ಕೋಟಿಗೂ ಅಧಿಕ ರಾಮನಾಮ ಡೆಪಾಸಿಟ್ಹೊಂದಿದೆ. ಇದರಲ್ಲಿ ಭಾರತೀಯರು ಮಾತ್ರವಲ್ಲದೆ ಅನಿವಾಸಿ ಭಾರತೀಯರು ಕೂಡ ಖಾತೆ ಹೊಂದಿದ್ದಾರೆ. ರಾಮನಾಮ ಬರೆಯುವಾಗ ಮಾಂಸಾಹಾರ, ನೀರುಳ್ಳಿ, ಬೆಳ್ಳುಳ್ಳಿ ವರ್ಜಿಸುವಂತಹ ಶರತ್ತುಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!