ಸಿಂದಿಯಾ-ಚೌಹಾಣ್ ಗುಪ್ತ ಮಾತುಕತೆ: ಗರಿಗೆದರಿದ ರಾಜಕೀಯ ಊಹಾಪೋಹ
Team Udayavani, Jan 22, 2019, 10:06 AM IST
ಭೋಪಾಲ್ : ಮಧ್ಯಪ್ರದೇಶದಲ್ಲಿ ಈಚೆಗೆ ನಡೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ದೊರಕಿಸಿಕೊಟ್ಟು ಅಂತಿಮ ಹಂತದಲ್ಲಿ ಸಿಎಂ ಹುದ್ದೆ ಪಡೆಯುವಲ್ಲಿ ವಿಫಲರಾದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಅವರು ನಿನ್ನೆ ಸೋಮವಾರ ತಡರಾತ್ರಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಸುಮಾರು 40 ನಿಮಿಷಗಳ ಗುಪ್ತ ಮಾತುಕತೆ ನಡೆಸಿರುವುದು ಹಲವಾರು ರಾಜಕೀಯ ಊಹಾಪೋಹಗಳನ್ನು ಸೃಷ್ಟಿಸಿದೆ.
ಮಾತುಕತೆ ಬಳಿಕ ಚವಾಣ್ ಅವರು ಸಿಂದಿಯಾ ಅವರೊಂದಿಗೆ ಮನೆಯ ಹೊರಗಿನ ವರೆಗೂ ನಡೆದುಕೊಂಡು ಬಂದು ಸಿಂದಿಯಾ ಅವರು ಕಾರಿನಲ್ಲಿ ಆಸೀನರಾಗುವ ವರಗೆ ಜತೆಗಿದ್ದು ಬೀಳ್ಕೊಡುವ ಸ್ನೇಹ ಸೌಹಾರ್ದತೆ ತೋರಿರುವುದು ಹಲವಾರು ಹುಬ್ಬುಗಳು ಮೇಲೇರುವಂತೆ ಮಾಡಿದೆ.
ಆದರೆ ‘ಈ ಭೇಟಿಯ ಬಗ್ಗೆ ಯಾವುದೇ ಊಹಾಪೋಹಗಳು ಬೇಡ; ಇದು ಕೇವಲ ಸ್ನೇಹ ಸೌಹಾರ್ದದ ಭೇಟಿ’ ಎಂದು ಉಭಯ ನಾಯಕರೂ ಹೇಳಿಕೊಂಡಿದ್ದಾರೆ. ಆದರೆ ಈ ಗುಪ್ತ ಮಾತುಕತೆಯ ರಾಜಕೀಯ ಫಲಶ್ರುತಿ ಇನ್ನಷ್ಟೇ ಕಂಡು ಬರಬೇಕಿದೆ ಎಂದು ರಾಜಕೀಯ ವಲಯದಲ್ಲಿ ಆಡಿಕೊಳ್ಳಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರದ ಸಿಎಂ ಹುದ್ದೆ ಕಮಲ್ ನಾಥ್ ಅವರ ಪಾಲಿಗೆ ಹೋದಾಗ ಸಿಂದಿಯಾ ಅವರು ಉಪ ಮುಖ್ಯಮಂತ್ರಿ ಹುದ್ದೆಯನ್ನು ತಿರಸ್ಕರಿಸಿದ್ದರು. ಇತ್ತ ಶಿವರಾಜ್ ಸಿಂಗ್ ಚೌಹಾಣ್ ಅವರೂ ವಿರೋಧ ಪಕ್ಷ ನಾಯಕನ ಹುದ್ದೆಯನ್ನೂ ತಿರಸ್ಕರಿಸಿದ್ದರು. ಮಧ್ಯಪ್ರದೇಶದಲ್ಲಿ 2003ರಿಂದಲೂ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಪರಾಭವಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್