ಮಂದಿರ ನಿರ್ಮಾಣವಾಗಲಿ ಶೇ.69 ಜನರ ಅಭಿಮತ
Team Udayavani, Jan 23, 2019, 12:30 AM IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಶೇ. 69ರಷ್ಟು ಜನರು ಬಯಸಿದ್ದಾರೆ ಎಂದು ಇಂಡಿಯಾ ಟುಡೇ ಹಾಗೂ ಕಾರ್ವಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಶೇ.22ರಷ್ಟು ಜನರು ಮಂದಿರ ನಿರ್ಮಾಣ ಬೇಡ ಎಂದಿದ್ದಾರೆ. 13 ಸಾವಿರ ಜನರನ್ನು ಸಮೀಕ್ಷೆ ನಡೆಸಲಾಗಿದೆ. ಅಷ್ಟೇ ಅಲ್ಲ, ಮೋದಿ ಸರ್ಕಾರವು ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶೇ. 67 ಜನರು ಬಯಸಿದ್ದಾರೆ. ಸುಗ್ರೀವಾಜ್ಞೆ ತರುವ ಬಗ್ಗೆ ಸಹಮತವಿಲ್ಲ ಎಂದು ಶೇ.24ರಷ್ಟು ಜನರು ಹೇಳಿದ್ದು, ಶೇ.9 ರಷ್ಟು ಜನರು ಈ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಬಯಸಲಿಲ್ಲ.