ಮದರಸಾ ಮುಚ್ಚಲು ಆಗ್ರಹ
Team Udayavani, Jan 23, 2019, 12:30 AM IST
ಲಕ್ನೋ: ಮುಸ್ಲಿಂ ಮಕ್ಕಳ ಮೇಲೆ ಐಸಿಸ್ ಉಗ್ರ ಸಂಘಟನೆ ಪ್ರಭಾವ ಬೀರುವುದನ್ನು ತಪ್ಪಿಸಬೇಕಾದರೆ ದೇಶಾದ್ಯಂತ ಪ್ರಾಥಮಿಕ ಹಂತದ ಮದರಸಾಗಳನ್ನು ಮುಚ್ಚಬೇಕು ಎಂದು ಕೋರಿ ಪ್ರಧಾನಿ ಮೋದಿಗೆ ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಪತ್ರ ಬರೆದಿದ್ದಾರೆ. ಅಲ್ಲದೆ, ಮುಸ್ಲಿಂ ಮಕ್ಕಳಿಗೆ ಮದರಸಾ ಶಿಕ್ಷಣ ಬೇಕೆಂದಾದರೆ, ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮದರಸಾಗೆ ಹೋಗಬಹುದು ಎಂದೂ ರಿಜ್ವಿ ಹೇಳಿದ್ದಾರೆ. ಮದರಸಾಗಳನ್ನು ಮುಚ್ಚದೇ ಇದ್ದರೆ, ದೇಶದ ಅರ್ಧದಷ್ಟು ಜನಸಂಖ್ಯೆಯು ಮುಂದಿನ 15 ವರ್ಷಗಳಲ್ಲಿ ಐಸಿಸ್ ಸಿದ್ಧಾಂತದ ಬೆಂಬಲಿಗರಾಗಿ ಬದಲಾಗಬಹುದು ಎಂದೂ ಪತ್ರದಲ್ಲಿ ಉಲ್ಲೇಖೀಸಲಾಗಿದೆ.