CM ನಿತೀಶ್ರನ್ನು ಸಿಕ್ಖ್ ಗುರುವಿಗೆ ಹೋಲಿಸಿದ್ದಕ್ಕೆ ಧಾರ್ಮಿಕ ಶಿಕ್ಷೆ
Team Udayavani, Jan 29, 2019, 6:33 AM IST
ಅಮೃತಸರ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಿಕ್ಖ್ ಗುರುವಿಗೆ ಹೋಲಿಸಿದ ಅಪರಾಧಕ್ಕಾಗಿ ಗುರುದ್ವಾರ ಪಟ್ನಾ ಸಾಹಿಬ್ ಪ್ರಬಂಧಕ ಸಮಿತಿಯ ಅಧ್ಯಕ್ಷ ಅವತಾರ್ ಸಿಂಗ್ ಹಿತ್ ಅವರಿಗೆ ಧಾರ್ಮಿಕ ಶಿಕ್ಷೆಯನ್ನು ನೀಡಲಾಗಿದೆ.
ಈ ಧಾರ್ಮಿಕ ಶಿಕ್ಷೆಯ ಪ್ರಕಾರ ಮುಂದಿನ ಹನ್ನೆರಡು ದಿನಗಳ ಕಾಲ ಅವತಾರ್ ಸಿಂಗ್ ಅವರು ಎರಡು ಗುರುದ್ವಾರಗಳಲ್ಲಿ ಭಕ್ತರ ಬೂಟುಗಳನ್ನು ಸ್ವಚ್ಚ ಗೊಳಿಸಬೇಕಾಗಿದೆ ಮತ್ತು ಸಮುದಾಯ ಅಡುಗೆ ಕೋಣೆಯ ಪಾತ್ರೆಗಳನ್ನು ತೊಳೆಯಬೇಕಾಗಿದೆ.
ಸಿಕ್ಖರ ಪರಮೋಚ್ಚ ಧಾರ್ಮಿಕ ಮಂದಿರವಾಗಿರುವ ಅಕಾಲ್ ತಕ್ತ್ ಜತ್ತೇದಾರ ಗ್ಯಾನಿ ಹರ್ ಪ್ರೀತ್ ಸಿಂಗ್ಅವರು ಅವತಾರ್ ಸಿಂಗ್ ಹಿತ್ ಅವರಿಗೆ ಈ ಧಾರ್ಮಿಕ ಶಿಕ್ಷೆ ನೀಡಿದ್ದಾರೆ.
ನಿನ್ನೆ ಸೋಮವಾರ ಅಮೃತಸರದಲ್ಲಿ ಅಕಾಲ್ ತಕ್ತ್ ಜತ್ತೇದಾರರು ಹಿತ್ ಅವರ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಶಿಕ್ಷೆ ಪ್ರಕಟಿಸಿದರು.
ಹಿತ್ ಅವರು ಎರಡು ಗುರುದ್ವಾರಗಳಲ್ಲಿ ಧಾರ್ಮಿಕ ಶ್ಲೋಕಗಳನ್ನು ಆಲಿಸಬೇಕು ಎಂದು ಕೂಡ ಜತ್ತೇದಾರರು ಅಪ್ಪಣೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ