ಇಂಡೋ-ಪಾಕ್ ಲಾಹೋರ್ ಬಸ್ಸಿಗೆ ಕಪ್ಪು ಜ್ಯಾಕೆಟ್, ಪ್ರತಿಭಟನೆ
Team Udayavani, Feb 16, 2019, 1:56 PM IST
ಫಗ್ವಾರಾ : 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದಿರುವ ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ” ಸದಾ ಎ ಸರ್ಹದ್ ” ಎಂಬ ಹೆಸರಿನ ಭಾರತ – ಪಾಕ್ ಬಸ್ ಸೇವೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ ಬಲ ಪಂಥೀಯ ಸಂಘಟನೆಗಳ ಸದಸ್ಯರು ಇಂದು ಶನಿವಾರ ಲಾಹೋರ್ಗೆ ಹೋಗುತ್ತಿದ್ದ ಬಸ್ಸಿನತ್ತ ಕಪ್ಪು ಜ್ಯಾಕೆಟ್ ಮತ್ತು ಟಿ ಶರ್ಟ್ಗಳನ್ನು ಬೀಸಿ ಪ್ರತಿಭಟನೆ ನಡೆಸಿದರು.
ಶಿವಸೇನಾ (ಹಿಂದುಸ್ಥಾನ್) ರಾಜ್ಯ ಘಟಕದ ಅಧ್ಯಕ್ಷ ಮನೀಷ್ ಸೂದ್ ನೇತೃತ್ವದಲ್ಲಿ ಪ್ರತಿಭಟನಕಾರರು ದಿಲ್ಲಿ – ಲಾಹೋರ್ ಪಾಕಿಸ್ಥಾನ್ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಶನ್ (ಪಿಟಿಡಿಸಿ) ಬಸ್ಸು 1ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕ್ಕರೆ ಕಾರ್ಖಾನೆ ಚೌಕದ ಮೂಲಕ ಸಾಗುತ್ತಿದ್ದ ವೇಳೆ ಪ್ರತಿಭಟನೆ ನಡೆಸಿದರು.
ಲಾಹೋರ್ಗೆ ಹೋಗುತ್ತಿದ್ದ ಪಿಟಿಡಿಸಿ ಬಸ್ಸಿಗೆ ನಾವು ಕಪ್ಪು ಬಾವುಟ ತೋರಿಸಬೇಕೆಂದಿದ್ದೆವು; ಆದರೆ ಪೊಲೀಸರು ನಮ್ಮ ಕೈಯಿಂದ ಕಪ್ಪು ಬಾವುಟಗಳನ್ನು ಕಸಿದುಕೊಂಡರು ಎಂದು ಸೂದ್ ಹೇಳಿದರು.
ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ಥಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಸೂದ್ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್