ನ್ಯಾಶನಲ್ ಹೆರಾಲ್ಡ್ ಕೇಸು: ತೀರ್ಪು ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್
Team Udayavani, Feb 18, 2019, 11:06 AM IST
ಹೊಸದಿಲ್ಲಿ : ನ್ಯಾಶನಲ್ ಹೆರಾಲ್ಡ್ ಪ್ರಕಾಶನ ಸಂಸ್ಥೆಯಾಗಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ತಾನಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಏಕ ಸದಸ್ಯ ಪೀಠ ನೀಡಿರುವ ನಿರ್ದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ಮೇಲಿನ ತೀರ್ಪನ್ನು ದಿಲ್ಲಿ ಹೈಕೋರ್ಟ್ ಇಂದು ಸೋಮವಾರ ಕಾಯ್ದಿರಿಸಿತು.
ಎಜೆಎಲ್ ತನ್ನ ವಾದವನ್ನು ಮುಗಿಸಿದ ಬಳಿಕ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ಜಸ್ಟಿಸ್ ವಿ ಕೆ ರಾವ್ ಅವರನ್ನು ಒಳಗೊಂಡ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತು.
ಮಾತ್ರವಲ್ಲದೆ ಮೂರು ದಿನಗಳ ಒಳಗೆ ತಮ್ಮ ಲಿಖೀತ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯ, ಎಜೆಎಲ್ ಮತ್ತು ಕೇಂದ್ರ ಸರಕಾರದ ವಕೀಲರಿಗೆ ಸೂಚಿಸಿತು.