ಕರ್ತವ್ಯಕ್ಕೆ ತೆರಳದಿರಿ ಎಂದಿದ್ದ ಯೋಧನ ಪತ್ನಿ ಆತ್ಮಹತ್ಯೆ
Team Udayavani, Feb 19, 2019, 12:30 AM IST
ರಜೆ ಮೇಲೆ ಮನೆಗೆ ಆಗಮಿಸಿದ್ದ ಯೋಧನೊಬ್ಬ ಪುನಃ ಕರ್ತವ್ಯಕ್ಕೆ ಹಾಜರಾಗುವುದು ಬೇಡ ಎಂದು ಹಠ ಹಿಡಿದಿದ್ದ ಆತನ ಪತ್ನಿ ಮೀನಾಕ್ಷಿ ಜೇಠಾ (22) ಎಂಬವರು ತಮ್ಮ ಮಾತಿಗೆ ಮನ್ನಣೆ ಸಿಗದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದ್ವಾರಕಾ ಜಿಲ್ಲೆಯ ಕಂಬಾಲಿಯಾ ಎಂಬ ಪಟ್ಟಣದ ಯೋಗೇಶ್ವರ ನಗರ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಆಕೆಯ ಪತಿ, ಭೂಪೇಂದ್ರ ಸಿನ್ಹಾ ಜೇಠಾÌ, ಜಮ್ಮು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾರದ ಹಿಂದೆ ರಜೆಯ ಮೇರೆಗೆ ಮನೆಗೆ ಬಂದ ಬೆನ್ನಲ್ಲೇ ಗುಲ್ಮಾರ್ಗ್ನಲ್ಲಿ ಹಿಮಪಾತ ಸಂಭವಿಸಿತ್ತು. ಅದಾಗಿ ಒಂದೆರಡು ದಿನದಲ್ಲೇ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 40 ಸೈನಿಕರು ಮೃತಪಟ್ಟಿದ್ದರು. ಇದರಿಂದ ಭೀತಿಗೊಳಗಾದ ಮೀನಾಕ್ಷಿ, ಪತಿಯನ್ನು ಸೈನ್ಯಕ್ಕೆ ಹಿಂದಿರುಗಬಾರದೆಂದು ಭಾರೀ ಒತ್ತಡ ಹೇರಿದರು. ಆದರೆ, ಪತಿ ಇದನ್ನು ಮಾನ್ಯ ಮಾಡದ ಕಾರಣ ಬೇಸತ್ತ ಅವರು, ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!