ಇಮ್ರಾನ್ ಹೊಸ ಪ್ರಧಾನಿ, ಅವರಿಗೊಂದು ಚಾನ್ಸ್ ಕೊಡಬೇಕು: ಮೆಹಬೂಬ
Team Udayavani, Feb 19, 2019, 12:21 PM IST
ಶ್ರೀನಗರ : ”ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್ ಶಾಮೀಲಾಗಿರುವುದಕ್ಕೆ ಪುರಾವೆ ಇರುವುದರಿಂದಲೇ ಭಾರತ, ಪಾಕಿಸ್ಥಾನವನ್ನು ಹೊಣೆ ಮಾಡಿದೆ; ನಿಮ್ಮ ದೇಶ ಎಲ್ಲಕ್ಕಿಂತ ಮೊದಲು ನುಡಿದಂತೆ ನಡೆಯಬೇಕು” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಚಾಟಿ ಬೀಸಿದ್ದಾರೆ.
”ಪಠಾಣ್ಕೋಟ್ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಆ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ಇಮ್ರಾನ್ ಗೆ ಮೆಹಬೂಬ ತಿರುಗೇಟು ನೀಡಿದ್ದಾರೆ.
”ಹಾಗಿದ್ದರೂ ಇಮ್ರಾನ್ ಖಾನ್ ಈಚೆಗಷ್ಟೇ ದೇಶದ ಪ್ರಧಾನಿ ಆಗಿರುವುದರಿಂದ ಅವರಿಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಒಂದು ಚಾನ್ಸ್ ಕೊಡಬೇಕು” ಎಂದಿರುವ ಮೆಹಬೂಬ, ”ಪಾಕ್ ವಿರುದ್ಧದ ಯುದ್ಧದ ಮಾತುಗಳು ಮುಂಬರುವ ಚುನಾವಣೆಯಿಂದಾಗಿ ಕೇಳಿ ಬರುತ್ತಿವೆಯೇ ಹೊರತು ಬೇರೇನೂ ಅಲ್ಲ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ, ‘ಪಾಕಿಸ್ಥಾನ ಈ ಪ್ರಾಂತ್ಯದಲ್ಲಿ ಸ್ಥಿರತೆಯನ್ನು ಬಯಸುತ್ತದೆ; ಪುಲ್ವಾಮಾ ಉಗ್ರ ದಾಳಿಯನ್ನು ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕವಿರುವ ಪುರಾವೆಗಳನ್ನು ಹೊಸದಿಲ್ಲಿ ಕೊಟ್ಟರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ