ಹುತಾತ್ಮರ ಸಾಲ ಮನ್ನಾ
Team Udayavani, Feb 20, 2019, 12:30 AM IST
ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಭಾರತೀಯ ಸೈನಿಕರ ಕುಟುಂಬಗಳ ನೆರವಿಗೆ ಧಾವಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಸಾವನ್ನಪ್ಪಿದ ಯೋಧರಲ್ಲಿ 23 ಸೈನಿಕರು ಎಸ್ಬಿಐನಿಂದ ಸಾಲ ಪಡೆದಿದ್ದು, ಆ ಸಾಲಗಳನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಿರುವುದಾಗಿ ಘೋಷಿಸಿದೆ. ಜತೆಗೆ, ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ಎಸ್ಬಿಐ ಗ್ರಾಹಕರಾಗಿದ್ದ ಆ ಎಲ್ಲಾ ಸೈನಿಕರ ಸಂಬಂಧಿಗಳಿಗೆ ತಲಾ 30 ಲಕ್ಷ ರೂ. ವಿಮಾ ಪರಿಹಾರ ನೀಡಲು ಬ್ಯಾಂಕ್ ತೀರ್ಮಾನಿಸಿದೆ. ನಿಯಮದ ಪ್ರಕಾರ, ಮೃತ ಯೋಧರ ಹತ್ತಿರದ ಸಂಬಂಧಿಗೆ (ನಾಮಿನಿ) ವಿಮಾ ಮೊತ್ತ ಲಭ್ಯವಾಗಲಿದೆ ಎಂದಿರುವ ಬ್ಯಾಂಕ್, ಇದಕ್ಕೂ ಮಿಗಿಲಾಗಿ, ಯೋಧರ ಸಾಲದ ಹೊರೆ ಇಳಿಸುವ ಮೂಲಕ ಅವರ ಕುಟುಂಬಗಳಿಗೆ ನೆರವಾಗುತ್ತಿರುವುದಾಗಿ ಹೇಳಿದೆ.