ಹಾಗೆಅಳುತ್ತಿದ್ದ ಮಗುವನ್ನು ಹೀಗೆಸಮಾಧಾನಪಡಿಸಿದ Air India ಸಿಬ್ಬಂದಿ!
Team Udayavani, Mar 8, 2019, 8:46 AM IST
ಏರ್ ಇಂಡಿಯಾದ ಡ್ರೀಂ ಲೈನರ್ ವಿಮಾನದಲ್ಲಿ ಲಂಡನ್ ಗೆ ಪ್ರಯಾಣಿಸುತ್ತಿದ್ದ ದಂಪತಿಗೆ ಆದ ವಿಶೇಷ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಯ ಸೇವಾಬದ್ಧತೆಯನ್ನು ಪ್ರಶಂಸಿಸಿ ಈ ದಂಪತಿ ಶಹಬ್ಬಾಸ್ ಗಿರಿ ನೀಡಿದ್ದಾರೆ.
‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ನಂತಹ ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿ ಮತ್ತು ಕಿರುತೆರೆ ನಟಿ ಸೌಮ್ಯಾ ಟಂಡನ್ ತನ್ನ ಪುಟ್ಟ ಮಗುವಿನೊಂದಿಗೆ ಲಂಡನ್ ಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಗು ನಿದ್ರಿಸದೆ ರಚ್ಚೆ ಹಿಡಿದಿತ್ತು. ಮಗುವಿಗೆ ವಿಮಾನ ಪ್ರಯಾಣದ ಅನುಭವವಿಲ್ಲದಿದ್ದ ಕಾರಣ ಹೀಗಾಗಿರಬೆಕೆಂದು ಆ ದಂಪತಿ ಅಂದುಕೊಂಡಿದ್ದರು ಮತ್ತು ಮಗುವನ್ನು ಸಮಾಧಾನಪಡಿಸಲು ಸಾಧ್ಯವಾಗದೇ ಕಂಗಾಲಾಗಿದ್ದರು.
ಆ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿಯೊಬ್ಬರು ಮಗುವನ್ನು ಎತ್ತಿಕೊಂಡು ‘ಜೋಕಾಲಿ’ ರೀತಿಯಲ್ಲಿ ಆಡಿಸಿದಾಗ ಮಗು ಸುಮ್ಮನಾಗುತ್ತದೆ ಮತ್ತು ಖುಷಿಯಿಂದ ನಗುತ್ತಿರುತ್ತದೆ. ಈ ವಿಚಾರವನ್ನು ಸೌಮ್ಯ ಅವರ ಪತಿ ವಿಡಿಯೋ ಸಹಿತ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತು ಏರ್ ಇಂಡಿಯಾ ಸಿಬ್ಬಂದಿಯ ಸೇವಾಬದ್ಧತೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಅನ್ನು ಸೌಮ್ಯ ಟಂಡನ್ ಅವರೂ ಸಹ ಶೇರ್ ಮಾಡಿಕೊಂಡಿದ್ದು ವಿಮಾನದ ಸಿಬ್ಬಂದಿಯ ಸೇವಾಪರತೆಯಿಂದಾಗಿ ನಮಗೆ ಉಂಟಾಗಿದ್ದ ಆತಂಕ ದೂರವಾಯ್ತು ‘ಥ್ಯಾಂಕ್ಸ್ ಏರ್ ಇಂಡಿಯಾ’ ಎಂದವರು ಬರೆದುಕೊಂಡಿದ್ದಾರೆ.
Had a wonderful experience travelling @airindiain. I bet no other carrier has this much dedication to customer satisfaction. My son was having trouble sleeping. Flight attendant showed me awesome skill to keep baby calm during flight!! BIG THANK YOU pic.twitter.com/BNLUWqbvTa
— @rgknp (@rgknp) March 8, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ