ಗಾಂಧಿ ಕುಟುಂಬಕ್ಕೆ ಚುನಾವಣೆ ಎಂದರೆ ಪಿಕ್ ನಿಕ್ ಇದ್ದಂತೆ
Team Udayavani, Mar 19, 2019, 4:30 AM IST
ಲಕ್ನೋ: ‘ಈ ನಮ್ಮ ಗಾಂಧಿ ಕುಟುಂಬಕ್ಕೆ ಚುನಾವಣೆಗಳೆಂದರೆ ಪಿಕ್ ನಿಕ್ ಇದ್ದಂತೆ. ಚುನಾವಣಾ ಸಂದರ್ಭದಲ್ಲಿ ತಮಗೆ ಬೇಕಾದಲ್ಲಿ ಬೇಕಾದ ರೀತಿಯಲ್ಲಿ ತಿರುಗಾಡುತ್ತಾರೆ. ಮತ್ತೆ ಅವರು ನಿಮಗೆ ಸಿಗುವುದು ಐದು ವರ್ಷಗಳ ಬಳಿಕವೇ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ವ್ಯಂಗ್ಯವಾಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕ ವಾಧ್ರಾ ಗಾಂಧಿ ಅವರು ತಮ್ಮ ಪಕ್ಷದ ಪರವಾಗಿ ಉತ್ತರಪ್ರದೇಶದಲ್ಲಿ ಭರ್ಜರಿ ಪ್ರಚಾರ ಅಭಿಯಾನವನ್ನು ಕೈಗೊಂಡಿದ್ದಾರೆ. ತಮ್ಮ ‘ತ್ರಿ ದಿನ’ ಪ್ರಯಾಗ್ ರಾಜ್ ಪ್ರಚಾರದ ಮೊದಲನೇ ದಿನ ಪ್ರಿಯಾಂಕ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು ಮತ್ತು ಗಂಗಾ ನದಿಯಲ್ಲಿ ದೋಣಿ ವಿಹಾರವನ್ನೂ ನಡೆಸಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನಿಸಿ ರಾಜ್ಯದ ಉಪಮುಖ್ಯಮಂತ್ರಿ ಶರ್ಮಾ ಅವರು ಕೈ ನಾಯಕಿಯನ್ನು ಟೀಕಿಸಿದ್ದಾರೆ. ‘ಚುನಾವಣಾ ಸಂದರ್ಭಗಳಲ್ಲಿ ಬಂದು ಪಿಕ್ ನಿಕ್ ರೀತಿಯಲ್ಲಿ ಸುತ್ತಾಡಿ ಮರಳಿ ಹೋಗುವ ಇವರು ಮತ್ತೆ ನಿಮ್ಮ ಕೈಗೆ ಸಿಗುವುದು ಐದು ವರ್ಷಗಳ ಬಳಿಕವೇ. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವ ಅರಿವು ಇವರಿಗೆಲ್ಲಾ ಇದ್ದಂತಿಲ್ಲ, ‘ರಾಜ ಘರಾಣೆ’ ಎಂಬುದಾಗಿ ತಿಳಿದುಕೊಂಡಂತಿದೆ ಎಂದವರು ಅಣಕವಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಮೈತ್ರಿ ಪ್ರಯತ್ನ ವಿಫಲಗೊಳ್ಳುವ ಮೂಲಕ ಕಾಂಗ್ರೆಸ್ ಗೆ ಅಂದೇ ಮುಖಭಂಗವಾಗಿದೆ. ಇದೀಗ ಇವರೆಲ್ಲಾ ಮುಖ ಉಳಿಸಿಕೊಳ್ಳುವ ಸಲುವಾಗಿ ಇಂತಹ ನೌಟಂಕಿಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ನಿನ್ನೆ ಪ್ರಿಯಾಂಕ ಅವರು ನಡೆಸಿದ ‘ದೋಣಿ ವಿಹಾರ’ವೂ ಒಂದು ಎಂದು ಉಪಮುಖ್ಯಮಂತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Dy CM D Sharma on Priyanka Gandhi Vadra: Had it been old times,they would’ve been called a ‘Rajgharana’. They come during elections, have picnic, go back&return after 5 yrs. ‘Boat yatra’ is only for votes. Inki boat yatra mein khot pehle hi inke sehyogiyon ne darsha diya. (18.03) pic.twitter.com/caOcWJkIiC
— ANI UP (@ANINewsUP) March 19, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ