ಭಾರತದಿಂದಲೇ ಉತ್ತರಾಧಿಕಾರಿ ಆಯ್ಕೆ: ದಲೈಲಾಮಾ
Team Udayavani, Mar 19, 2019, 5:39 AM IST
ಧರ್ಮಶಾಲಾ: ಬೌದ್ಧರ ಧರ್ಮಗುರು ಟಿಬೇಟಿನ ದಲೈಲಾಮಾ ತನ್ನ ಉತ್ತರಾಧಿಕಾರಿಯ ಬಗ್ಗೆ ಮಾತನಾಡಿದ್ದು, ನನ್ನ ಮುಂದಿನ ಅವತಾರ ಅಥವಾ ಉತ್ತರಾಧಿಕಾರಿ ಆಯ್ಕೆ ಭಾರತದಿಂದಲೇ ಆಗಬಹುದು ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಲೈಲಾಮಾ, ಬೌದ್ಧರ ಮುಂದಿನ ಧರ್ಮಗುರು ಅಂದರೆ ದಲೈಲಾಮಾ ಭಾರತದಿಂದಲೇ ಆಯ್ಕೆಯಾಗಬಹುದು. ಟಿಬೇಟ್ ಮೇಲಿನ ಹಿಡಿತದಿಂದ ಚೀನಾ ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಬಹುದು. ಆದರೆ ಅದನ್ನು ಯಾರೂ ಗೌರವಿಸುವುದಿಲ್ಲ ಎಂದಿದ್ದಾರೆ.
ಚೀನಾ ದೇಶ ದಲೈಲಾಮಾರ ಪುನರ್ಜನ್ಮದ ಬಗ್ಗೆ ಈಗಲೇ ಆಲೋಚನೆ ಮಾಡುತ್ತಿದೆ. ಅವರಿಗೆ ನನಗಿಂತ ನನ್ನ ಮುಂದಿನ ದಲೈಲಾಮಾರ ಬಗ್ಗೆ ಜಾಸ್ತಿ ಕಳವಳ ಇದೆ. ಮುಂದಿನ ದಿನಗಳಲ್ಲಿ ಇಬ್ಬರು ದಲೈಲಾಮಾರು ಬಂದರೂ ಅಚ್ಚರಿ ಪಡಬೇಕಿಲ್ಲ. ಒಬ್ಬರು ಟಿಬೇಟ್ ಸಂಪ್ರದಾಯದ ಆಯ್ಕೆ, ಮತ್ತೊಬ್ಬರನ್ನು ಚೀನಾ ಆಯ್ಕೆ ಮಾಡಬಹುದು. ಆದರೆ ಚೀನಾ ಆಯ್ಕೆ ಮಾಡಿದ ದಲೈಲಾಮಾರಿಗೆ ಯಾರೂ ಗೌರವ ಕೊಡುವುದಿಲ್ಲ ಎಂದರು.
ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಲು ತನಗೂ ಹಕ್ಕು ಇದೆ ಎಂದು ಚೀನಾ ವಾದಿಸುತ್ತಿದೆ. ಆದರೆ ಚೀನಾಗೆ ಯಾವುದೇ ಹಕ್ಕು ಇಲ್ಲ. ಟಿಬೇಟ್ ನ ಸಂಪ್ರದಾಯದಂತೆ ದಲೈಲಾಮಾರು ಮರಣ ಹೊಂದಿದ ನಂತರ ಅವರ ಆತ್ಮ ಮುಂದಿನ ಅವತಾರಕ್ಕಾಗಿ ಪುಟ್ಟ ಬಾಲಕನ ಆತ್ಮವನ್ನು ಸೇರುತ್ತದೆ. ಆ ಬಗ್ಗೆ ಬಾಲಕನನ್ನು ಧರ್ಮಗುರುಗಳು ಮಾತ್ರ ಗುರುತಿಸುತ್ತಾರೆ ಎಂದು 83ರ ಹರೆಯದ ನೋಬೆಲ್ ಶಾಂತಿ ಪುರಸ್ಕಾರ ವಿಜೇತ 14ನೇ ದಲೈಲಾಮಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…