ಬಿಹಾರ ಎನ್ಡಿಎ ಸೀಟು ಹಂಚಿಕೆ ಪ್ರಕಟ; ರವಿಶಂಕರ್ ಪಟ್ನಾ ಸಾಹಿಬ್
Team Udayavani, Mar 23, 2019, 10:24 AM IST
ಪಟ್ನಾ : ಬಿಜೆಪಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಯನ್ನು ಒಳಗೊಂಡ ಬಿಹಾರದಲ್ಲಿನ ಎನ್ಡಿಎ ಕೂಟ ಇಂದು ಶನಿವಾರ ರಾಜ್ಯದಲ್ಲಿನ 40 ಲೋಕಸಭಾ ಸೀಟುಗಳಲ್ಲಿ ಒಂದನ್ನು ಹೊರತುಪಡಿಸಿ (ಖಗಾರಿಯಾ ಕ್ಷೇತ್ರ) ಉಳಿದ 39 ಸ್ಥಾನಗಳ ಹಂಚಿಕೆಯನ್ನು ಪ್ರಕಟಿಸಿವೆ.
ಬಿಹಾರ ಎನ್ಡಿಎ ಸೀಟು ಹಂಚಿಕೆ ಸೂತ್ರವನ್ನು ರಾಜ್ಯದ ಪ್ರಭಾರಿಯಾಗಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸುದ್ದಿ ಗೋಷ್ಠಿಯಲ್ಲಿ ಪ್ರಕಟಿಸಿದರು. ಸೀಟು ಹಂಚಿಕೆ ವಿವರ ಇಂತಿದೆ.
ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ – ಪಟ್ನಾ ಸಾಹಿಬ್ ಕ್ಷೇತ್ರ.
ಗಿರಿರಾಜ್ ಸಿಂಗ್ – ಬೇಗುಸರಾಯ್
ರಾಧಾ ಮೋಹನ್ ಸಿಂಗ್ – ಮೋತಿಹಾರಿ
ಆರ್ ಕೆ ಸಿಂಗ್ – ಅರಾ
ಅಶ್ವಿನಿ ಕುಮಾರ್ – ಬಕ್ಸಾರ್
ರಾಮ್ ಕೃಪಾಲ್ ಯಾದವ್ – ಪಾಟಲೀಪುತ್ರ.
ಲೋಕಜನಶಕ್ತಿ ಪಕ್ಷ : ಚಂದನ್ ಕುಮಾರ್ – ನವಾಡಾ
ರಾಜ್ಯ ಬಿಜೆಪಿ ಅಧ್ಯಕ್ಷ ನಿತಾಯನಂದ ರಾಯ್ -ಉಜಿಯಾರ್ಪುರ
ರಾಜೀವ್ ಪ್ರತಾಪ್ ರೂಡಿ – ಸರನ್
ಜೆಡಿಯು ಅಜಯ್ ಕುಮಾರ್ ಮಂಡಲ್ – ಭಾಗಲ್ಪುರ
ಬಿಜೆಪಿಯ ಛೇದಿ ಪಾಸ್ವಾನ್ – ಸಾಸಾರಾಮ್
ಬಿಜೆಪಿಯ ಪ್ರದೀಪ್ ಕುಮಾರ್ ಸಿಂಗ್ – ಅರಾರಿಯಾ
ಎಲ್ಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಶುಪತಿ ಕುಮಾರ್ ಪಾರಸ್ – ಹಾಜೀಪುರ
ಎಲ್ಜೆಪಿ ಮುಖ್ಯಸ್ಥನ ಪುತ್ರ ಚಿರಾಗ್ ಪಾಸ್ವಾನ್ – ಜಮೂಯಿ.
ಬಿಜೆಪಿಯ ಗೋಪಾಲ್ಜೀ ಠಾಕೂರ್ – ದರ್ಭಾಂಗ
ಅಶೋಕ್ ಯಾದವ್ – ಮಧುಬನಿ ಕ್ಷೇತ್ರ.
ಎಲ್ಜೆಪಿಯ ವೀಣಾ ದೇವಿ – ವೈಶಾಲಿ ಕ್ಷೇತ್ರ.
ಬಿಜೆಪಿಯ ರಮಾ ದೇವಿ – ಶಿವಹರ ಕ್ಷೇತ್ರ
ಜೆಡಿಯು ಅಭ್ಯರ್ಥಿ ಕವಿತಾ ಸಿಂಗ್ – ಸಿವಾನ್ ಕ್ಷೇತ್ರ
ಜೆಡಿಯು ಅಭ್ಯರ್ಥಿ ಕೌಶಲೇಂದ್ರ ಕುಮಾರ್ – ನಾಲಂದ
ಸಂತೋಷ್ ಕುಮಾರ ಕುಶ್ವಾಹ್ – ಪೂರ್ಣಿಯ
ಜೆಡಿಯು ಅಭ್ಯರ್ಥಿ ವಿಜಯ್ ಮಾಂಜಿ – ಗಯಾ
ದಿನೇಶ್ ಚಂದ್ರ ಯಾದವ್ – ಮಾಧೇಪುರ
ಎಲ್ಜೆಪಿಯ ಆರು ಅಭ್ಯರ್ಥಿಗಳ ಪೈಕಿ ಮೂವರು – ಚಿರಾಗ್, ಪಾರಸ್ ಮತ್ತು ರಾಮಚಂದ್ರ ಪಾಸ್ವಾನ್ (ಸಮಷ್ಟೀಪುರ) ಒಂದೇ ಕುಟುಂಬದವರಾಗಿದ್ದಾರೆ.
ಎಲ್ಜೆಪಿ ಹಾಲಿ ಸಂಸದರಾಗಿರುವ ಮೆಹಬೂಬ್ ಅಲಿ ಕೈಸರ್ ಅವರ ಖಗಾರಿಯಾ ಕ್ಷೇತ್ರ ಇನ್ನೂ ಅನಿರ್ಧರಿತವಾಗಿದೆ.
2014ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಬಿಹಾರದಲ್ಲಿ 22 ಸೀಟು ಗೆದ್ದಿತ್ತು. 2017ರಲ್ಲಿ ಎನ್ಡಿಎ ತೆಕ್ಕೆಗೆ ಸೇರಿರುವ ಜೆಡಿಯು ಗೆ ಬಿಜೆಪಿ ಐದು ಸೀಟುಗಳನ್ನು ಬಿಟ್ಟುಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!