ಮೈಸೂರು ಅಸೋಸಿಯೇಶನ್‌ನಲ್ಲಿ ಬಂಗಾರ ಹಬ್ಬದ ದತ್ತಿ ಉಪನ್ಯಾಸ


Team Udayavani, Feb 8, 2017, 2:24 PM IST

07-Mum04.jpg

ಮುಂಬಯಿ: ಮೌಲ್ಯಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಜಿಯ ವಿಚಾರಧಾರೆಗಳು ಹೆಚ್ಚು ಪ್ರಸ್ತುತವಾಗಿವೆ. ಗಾಂಧೀಜಿಯವರ ಪ್ರಕಾರ ನಾವು ಮೊದಲು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಚಿಂತನೆಯಲ್ಲಿ ಕೊಡುಕೊಳ್ಳುವಿಕೆ ಇರಬೇಕು. ಹೊಸ ಹೊಸ ಚಿಂತನೆಗಳನ್ನು ಸ್ವೀಕರಿಸಬೇಕು. ಆದರೆ ಅದರಲ್ಲಿಯೇ ಲೀನವಾಗಿ ಬಿಡಬಾರದು. ಗಾಂಧೀಜಿಯವರು ವೈಯಕ್ತಿಕವಾಗಿ ಆಚರಿಸಿಕೊಂಡು ಬಂದಂತಹ ಬ್ರಹ್ಮಚರ್ಯ, ಮದ್ಯನಿಷೇಧ ಇತ್ಯಾದಿ ಕೆಲವೊಂದು ಧೋರಣೆಗಳನ್ನು ಸಾಮೂಹಿಕವಾಗಿ ಸಮಾಜದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳು ಇಂದಿಗೂ ಅಪ್ರಸ್ತುತವಾಗಿವೆ. ಇದನ್ನು ಹೊರತುಪಡಿಸಿದರೆ ಗಾಂಧೀಜಿಯ ಉಳಿದೆಲ್ಲ ವಿಚಾರಗಳು ಉನ್ನತಮಟ್ಟದ್ದಾಗಿವೆ. ಅವರ ವಿಚಾರ ಧಾರೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾದವುಗಳು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ ಅವರು  ನುಡಿದರು.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್‌ ಮುಂಬಯಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದ ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ,  ಗಾಂಧೀಜಿ¿ ವ್ಯಕ್ತಿತ್ವ ಬಹಳ ದೊಡ್ಡದು. ಅಹಿಂಸೆ ಅನ್ನೋದು ನಮ್ಮ ವೇದ ಉಪನಿಷತ್‌ನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ಅಹಿಂಸೆಯನ್ನು ಗಾಂಧೀಜಿಯವರು ತಮ್ಮ ಜನಜೀವನದ ಧ್ಯೇಯವಾಗಿಟ್ಟುಕೊಂಡರು. ಅವರ ಚಿಂತನೆಯಲ್ಲಿ ಸಾಮಾಜಿಕ ವಿಚಾರದಲ್ಲಿ ಮನುಷ್ಯನ ಆಚಾರ ವಿಚಾರದಲ್ಲಿ ಪರಸ್ಪರ ನಿರ್ಭರತೆಯಿದೆ. ಅವರ ಅಪರಿಗ್ರಹ ಚಿಂತನೆ ಇವತ್ತಿನ ಸಂದರ್ಭದಲ್ಲಿ ಅತಿ ಅಗತ್ಯ. ಅಂದು ಗಾಂಧೀಜಿಯವರು ಹೇಳಿದ ಮಾತುಗಳು ಇವತ್ತಿಗೂ ಪ್ರಸ್ತುತವಾಗಿದ್ದು, ಅವರ ಎಲ್ಲಾ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ವಿಚಾರಮಂಥನ ಮಾಡಬೇಕು ಎಂದರು.

ಕಾರ್ಯಕ್ರಮವು ಶೈಲಜಾ ಮಧುಸೂದನ್‌ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ ಮಂಜುನಾಥಯ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ವಿದ್ಯಾರ್ಥಿ ಜಯ ಸಾಲ್ಯಾನ್‌ ಅವರು ರಚಿಸಿರುವ ಶ್ರೀಕೃಷ್ಣ ಅವರ   ವರ್ಣಚಿತ್ರವನ್ನು ಶ್ರೀಕೃಷ್ಣ ಅವರಿಗೆ ಪ್ರಧಾನಿಸಿದರು.

ವಿಭಾಗದ ಮುಖ್ಯಸ್ಥ  ಡಾ| ಜಿ. ಎನ್‌. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ದತ್ತಿ ಉಪನ್ಯಾಸ ಮಾಲಿಕೆ ಕಳೆದ ಮೂವತ್ತನಾಲ್ಕು ವರ್ಷದಿಂದ ತಪ್ಪದೆ ನಡೆದುಕೊಂಡು ಬರುತ್ತಿದೆ. ಸಮಾಜಮುಖೀಯಾಗಿರುವ ಮೈಸೂರು ಅಸೋಸಿಯೇಶನ್‌ ಕನ್ನಡ ವಿಭಾಗದ ಅಕಾಡೆಮಿಕ್‌ ಪಾರ್ಟ್‌
ನರ್‌ ಎಂದುಕೊಂಡಿದ್ದೇನೆ. ವಿಶ್ವವಿದ್ಯಾಲಯ ಇಂದು ದ್ವೀಪವಾಗಿ ಉಳಿದಿಲ್ಲ. ಮುಂಬಯಿಯ ಅನೇಕ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಮೈಸೂರು ಅಸೋಸಿಯೇಶನ್‌ ಅಧ್ಯಕ್ಷೆ  ಕೆ. ಕಮಲಾ ಅವರು ಮಾತನಾಡಿ,  ನಾವು ಮಾಡುವ ಕಾರ್ಯ ನಮ್ಮ ಸುತ್ತಮುತ್ತಲಿರುವ ಎಲ್ಲರಿಗೂ ಒಳ್ಳೆದಾಗುವಂತಿರಬೇಕು. ಗಾಂಧೀಜಿಯವರ ತತ್ವಗಳನ್ನು ಇವತ್ತಿನ ಪೀಳಿಗೆಗೆ ಯಾವ ರೀತಿಯಲ್ಲಿ ಮುಟ್ಟಿಸಬೇಕು ಎನ್ನುವುದರ ಬಗ್ಗೆ ಚಿಂತಿಸಬೇಕು ಎಂದರು. ಕಾರ್ಯಕ್ರಮವನ್ನು ನೇಸರು ಸಂಪಾದಕಿ ಡಾ| ಜ್ಯೋತಿ ಸತೀಶ್‌ ಅವರು ನಿರೂಪಿಸಿದರು. ಕಾರ್ಯದರ್ಶಿ ಡಾ| ಜಿ. ಎಸ್‌. ಶಂಕರಲಿಂಗ ಅವರು ವಂದಿಸಿದರು.   ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಎರಡನೆ ದಿನದ ಕಾರ್ಯಕ್ರಮದಲ್ಲಿ ಬಿ. ಎನ್‌. ಶ್ರೀಕೃಷ್ಣ ಅವರು ‘ಉಪನಿಷತ್ತಿನಲ್ಲಿ ಮಾನವೀಯತೆ’ ವಿಷಯದ ಮೇಲೆ ಮಾತನಾಡಿ, ದಾನಮಾಡುವಾಗ ನಾವು ಯಾವುದನ್ನು ದಾನ ಮಾಡುತ್ತೇವೋ ಅದು ದಾನ ಮಾಡಲಿಕ್ಕೆ ಯೋಗ್ಯವಾಗಿರಬೇಕು. ದಯೆ ಧರ್ಮದ ಮೂಲವಾಗಿರಬೇಕು. ತನು ಮನ ಶುದ್ಧವಾಗಿರಬೇಕು. ನಿನ್ನ ಕೆಲಸ ಮಾಡು, ಪ್ರತಿಫಲದ ಅಪೇಕ್ಷೆ ಇಟ್ಟುಕೊಳ್ಳಬೇಡ. ನಿನ್ನ ಸ್ವಾಧ್ಯಾಯ ನಿನ್ನ ಆಜೀವ ಪರ್ಯಂತ ನಡೆಯಬೇಕು. ‘ಅತಿಥಿ ದೇವೋಭವ’ ಎಂಬ ವ್ರತವನ್ನು ಪರಿಪಾಲಿಸಬೇಕು. ಅನ್ನವನ್ನು ಹಾಳುಮಾಡಬಾರದು. ಅಗತ್ಯವಿದ್ದವರಿಗೆ ಅದನ್ನು ದಾನಮಾಡಿ. ಎಲ್ಲ ಇಂದ್ರಿಯಗಳಿಂತ ಪ್ರಾಣ ಶ್ರೇಷ್ಠವಾದುದು. ಸತ್ಯಮಾರ್ಗದ ಮೂಲಕ ಹೆಜ್ಜೆ ಇಡಬೇಕು. ಹೀಗೆ  ಉಪನಿಷತ್‌ನಲ್ಲಿ ಅಡಕವಾಗಿರುವ ಜೀವನ ಸಂದೇಶವನ್ನು ವಿಸ್ತಾರವಾಗಿ  ವಿವರಿಸಿದರು. ಇದೇ ಸಂದರ್ಭದಲ್ಲಿ ಕಳೆದ 34 ವರ್ಷದಿಂದ ನಡೆದು ಬಂದ ದತ್ತಿ ಉಪನ್ಯಾಸ ಮಾಲಿಕೆಯ ಕುರಿತ ನೇಸರು ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮವನ್ನು ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ನಿರೂಪಿಸಿದರು.

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.